ನಿನ್ನೆ ನಡೆದ ಸಂಪುಟ ಸಭೆಯಯಲ್ಲಿ ಸಚಿವ ಎಂಟಿಬಿ ನಾಗರಾಜ್ ಆರೋಗ್ಯ ಸಚಿವ ಸುಧಾಕರ್ ಕಾರ್ಯ ವೈಫಲ್ಯತೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ. ಬೆಡ್ ಕೊಡಿಸಿ,ಆಸ್ಪತ್ರೆ ಸಿಗ್ತಿಲ್ಲ ಅಂತ ನನ್ನ ಕ್ಷೇತ್ರದಲ್ಲಿ ದಿನವೂ ಹಲವು ಕರೆಗಳು ಬರ್ತಿವೆ. ನಮ್ಮ ಸಂಬಂಧಿಕರಿಗೆ ಹಾಸಿಗೆ ಸಿಗದೇ ಪರದಾಡಿದ್ರು.
ನಾನೇ ಖುದ್ದು ಆರೋಗ್ಯ ಸಚಿವರಿಗೆ ಮೂರು ಭಾರಿ ಕರೆ ಮಾಡಿದೆ. ಒಂದೇ ಒಂದು ಬೆಡ್ ಅಡ್ಜಸ್ಟ್ ಮಾಡೋಕೆ ಆಗಲಿಲ್ಲ. ಸಚಿವನಾದ ನನಗೇ ಹೀಗಾದ್ರೆ ಜನಸಾಮಾನ್ಯರ ಪಾಡೇನು..? ಎಂದು ಎಲ್ಲರೆದುರು ಪ್ರಶ್ನಿಸಿದ್ದಾರೆ. ಇನ್ನು ಸಚಿವರ, ಶಾಸಕರ, ಟಿಎಡಿಎ ಎಲ್ಲಾ ವೇತನ ಕಟ್ ಮಾಡಿ. ಗೃಹ ,ಕಂದಾಯ,ಆರೋಗ್ಯ ಇಲಾಖೆ ಹೊರತುಪಡಿಸಿ,
ಉಳಿದ ಎಲ್ಲಾ ಇಲಾಖೆಗಳ ಸಿಬ್ಬಂದಿಯ ಒಂದು ತಿಂಗಳ ವೇತನ ಹಿಡಿದುಕೊಳ್ಳಿ. ಇದರಿಂದ 5 ಸಾವಿರ ಕೋಟಿ ರೂಪಾಯಿ ಉಳಿತಾಯವಾಗುತ್ತೆ. ರಾಜ್ಯದ ಪ್ರತಿ ಕುಟುಂಬಕ್ಕೆ ₹15 ಸಾವಿರ ಹಣವನ್ನ ಹಾಕಿ. ಆಗ ಬೇಕಾದ್ರೆ ನೀವು 20 ದಿನ ಲಾಕ್ಡೌನ್ ಮಾಡಿ, ಜನರಿಗೆ ಏನೂ ಇಲ್ಲದೇ ನೀವು ಹೀಗೆ ಮಾಡಿದ್ರೆ ಹೇಗೆ..? ಎಂದು ಸರ್ಕಾರದ ವಿರುದ್ಧವೇ ಎಂಟಿಬಿ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ