Breaking News
Home / ಜಿಲ್ಲೆ / ಬೆಂಗಳೂರು / ಹೆಚ್ಚುವರಿ ಬಸ್​ ಬಿಟ್ಟ ಹಿನ್ನೆಲೆ: ಮೆಜೆಸ್ಟಿಕ್ ಬಳಿ ಭಾರೀ ಟ್ರಾಫಿಕ್ ಜಾಮ್

ಹೆಚ್ಚುವರಿ ಬಸ್​ ಬಿಟ್ಟ ಹಿನ್ನೆಲೆ: ಮೆಜೆಸ್ಟಿಕ್ ಬಳಿ ಭಾರೀ ಟ್ರಾಫಿಕ್ ಜಾಮ್

Spread the love

ಬೆಂಗಳೂರು: ನಿನ್ನೆ ಸಿಎಂ ಕ್ಲೋಸ್​​​ಡೌನ್​ ಅನೌನ್ಸ್​ ಮಾಡ್ತಿದ್ದಂತೆ ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಂಡಿದ್ದ ಕೆಲವರು ಊರು ಬಿಡೋದಕ್ಕೆ ಶುರುಮಾಡಿದ್ದಾರೆ.

ಇಂದು ರಾತ್ರಿಯಿಂದ ರಾಜ್ಯದಲ್ಲಿ ಕ್ಲೋಸ್​ಡೌನ್ ಜಾರಿಯಾಗಲಿದೆ. ಹೀಗಾಗಿ ಜನರು ಕುಟುಂಬಸಮೇತ, ಗಂಟು ಮೂಟೆ ಕಟ್ಟಿಕೊಂಡು ತಮ್ಮೂರಿನತ್ತ ತೆರಳುತ್ತಿದ್ದಾರೆ. ಹೀಗಾಗಿ ಮೂರು ಸಾರಿಗೆ ನಿಗಮಗಳಿಂದ 12 ಸಾವಿರಕ್ಕೂ ಅಧಿಕ ಬಸ್​​ಗಳ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಕೆಎಸ್​​ಆರ್​ಟಿಸಿ ಬಸ್​ಗಳನ್ನ ಬಿಟ್ಟ ಹಿನ್ನೆಲೆ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಬೆಳಗ್ಗೆ 5.30ರಿಂದ, ಮೆಜೆಸ್ಟಿಕ್ ಕೆಎಸ್​​ಆರ್​​ಟಿಸಿ ನಿಲ್ದಾಣದಿಂದ ಮೆಟ್ರೋ ಸ್ಟೇಷನ್ವರೆಗೂ ಫುಲ್ ಸಂಚಾರ ದಟ್ಟಣೆ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಹರಸಾಹಸಪಡುವಂತಾಗಿದೆ.

ಬಿಎಂಟಿಸಿ ಬಸ್​ಗಳಲ್ಲೂ ಜನರ ಸಂಖ್ಯೆ ಹೆಚ್ಚುತ್ತಿದೆ. ಜನರು ಬೆಂಗಳೂರಿನ ನಾನಾ ಕಡೆಗಳಿಂದ ಬಿಎಂಟಿಸಿ ಬಸ್​​ನಲ್ಲಿ ಬಂದು ಬಳಿಕ ಕೆಎಸ್‌ಆರ್​​ಟಿಸಿ ಬಸ್​​ನಲ್ಲಿ ಹಾಗೂ ರೈಲಿನಲ್ಲಿ ತಮ್ಮ ಊರಿಗೆ ತೆರಳುತ್ತಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ