ಬೆಂಗಳೂರು, ಫೆ.27 (ಪಿಟಿಐ)- ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪ್ರಮುಖ ನಾಯಕರು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 78ನೇ ವರ್ಷಕ್ಕೆ ಕಾಲಿಡುತ್ತಿರುವುದನ್ನು ಸ್ವಾಗತಿಸಿ, ಜನ್ಮದಿನದ ಶುಭಾಶಯವನ್ನು ಕೋರಿದರು.
ಶನಿವಾರ ಟ್ವೀಟರ್ನಲ್ಲಿ ಪ್ರಧಾನಿ ಅವರು, ಕರ್ನಾಟಕ ಸಿಎಂ-ಬಿಎಸ್ವೈಬಿಜೆಪಿ ಜೀ ಅವರ ಜನ್ಮದಿನದಂದು ಶುಭಾಶಯ. ಯಡಿಯೂರಪ್ಪ ಅವರು ನಮ್ಮ ಒಬ್ಬ ಅನುಭವಿ ನಾಯಕರಲ್ಲೊಬ್ಬರು, ಬಡವರ ಏಳಿಗೆ ಮತ್ತು ರೈತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.