Breaking News
Home / ರಾಜ್ಯ / ಇಂದಿನ ನಿಮ್ಮ ಗ್ರಹಬಲ

ಇಂದಿನ ನಿಮ್ಮ ಗ್ರಹಬಲ

Spread the love

ಮೇಷ: ಆಕರ್ಷಕವಾದ ದೇಹ ಸೌಂದರ್ಯ ಹಾಗೂ ಒಳ್ಳೆಯ ನಡತೆ, ಸದಾಚಾರ, ಆತ್ಮಚಿಂತನೆ ಹೆಚ್ಚಾಗಿರುವ ನೀವು ಸದಾ ಒಳಿತನ್ನೇ ಬಯಸುವಿರಿ. ಪರರ ದುಃಖ, ಕಾತುರತೆ, ದೃಢ ಮನಸ್ಸಿನ ನೀವು ಕರಗುವಿರಿ.

ವೃಷಭ: ಸತ್ಯವಾದಿಗಳಾಗಿ ಗುರುಹಿರಿಯಲ್ಲಿ ಭಕ್ತಿಯುಳ್ಳ ವರಾಗಿದ್ದ ನೀವು ನೀತಿ ನಿಯಮಗಳಿಗೆ ಬದ್ಧರಾಗುತ್ತೀರಿ. ಪ್ರತ್ಯಕ್ಷವಾಗಲೀ ಪರೋಕ್ಷವಾಗಲೀ ವಂಚನೆಯನ್ನು ಮಾಡಲು ಬಯಸುವುದಿಲ್ಲ.

ಮಿಥುನ: ಉತ್ತಮ ಆತ್ಮಬಲವನ್ನು ಹೊಂದಿರುವ ನೀವು ನಿರ್ದಿಷ್ಟ ಸಂಕಲ್ಪವನ್ನು ಸ್ವಪ್ರಯತ್ನದಿಂದ ಪೂರ್ಣಗೊಳಿಸುವಿರಿ. ದಾಕ್ಷಿಣ್ಯ, ಸಂಕೋಚ ಪ್ರವೃತ್ತಿಯನ್ನು ಸ್ವಲ್ಪ ದೂರ ಮಾಡಿಕೊಳ್ಳಿರಿ. ಶುಭವಿರುತ್ತದೆ.

ಕರ್ಕ: ವೈಯಕ್ತಿಕವಾಗಿ ಕಷ್ಟನಷ್ಟಗಳನ್ನು ಲೆಕ್ಕಿಸದೆ ಪರೋಪಕಾರವನ್ನು ಮಾಡುವ ನಿಮ್ಮ ಮನಸ್ಸು ಸದಾ ಪರರಿಗಾಗಿ ಮಿಡಿಯುವುದು. ವೈಮನಸ್ಸನ್ನು ಪರಿಹರಿಸುವ ಪ್ರವೃತ್ತಿ ನಿಮ್ಮನ್ನು ಮುನ್ನಡೆಸಲಿದೆ.

ಸಿಂಹ: ಸೂಕ್ಷ್ಮಗ್ರಾಹಿಗಳೂ ಮತ್ತು ಪ್ರೀತಿ ಪುರಸ್ಸರವಾದ ನಡವಳಿಕೆಯನ್ನು ಜೀವನದಲ್ಲಿ ಹೊಂದಿರುತ್ತೀರಿ. ಎಂತಹ ಪರಿಸ್ಥಿತಿಯಲ್ಲೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಕಿರು ಸಂಚಾರ ಒದಗಿ ಬರುವುದು.

ಕನ್ಯಾ: ಗುರು ಕಾರುಣ್ಯದಿಂದ ನಿಮ್ಮೆಣಿಕೆಯ ಎಲ್ಲಾ ಕೆಲಸ ಕಾರ್ಯಗಳು ನೆರವೇರಲಿದೆ. ಧನವಿನಿಯೋಗದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುರಿ. ಗೃಹಕೃತ್ಯದಲ್ಲಿ ಖರ್ಚುವೆಚ್ಚ ಗಳನ್ನು ನಿಯಂತ್ರಿಸುವುದು.

ತುಲಾ: ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಹೊಂದಿಯಾರು. ಆದರೂ ಪ್ರಯತ್ನಬಲದಿಂದ ಅಧಿಕ ಲಾಭವನ್ನು ಹೊಂದುವಿರಿ. ವಿಳಂಬವಾದರೂ ಉತ್ತಮವಾಗಲಿದೆ. ಪತ್ನಿ, ಮಕ್ಕಳಿಂದ ಸಮಾಧಾನ ಸಿಗಲಿದೆ.

ವೃಶ್ಚಿಕ: ವೈವಾಹಿಕ ಜೀವನದಲ್ಲಿ ಅಸ್ತವ್ಯಸ್ತತೆ, ಭಿನ್ನಾಭಿಪ್ರಾಯಗಳಿಂದ ಕಲಹ ತಂದೀತು. ವೃತ್ತಿರಂಗದಲ್ಲಿ ಮೇಲಾಧಿಕಾರಿ ವರ್ಗದವರಿಂದ ಕಿರಿಕಿರಿಯು ಕಂಡು ಬರಲಿದೆ. ಪ್ರಯಾಣದಲ್ಲಿ ಅಡಚಣೆ ಕಂಡುಬರಬಹುದು.

ಧನು: ಅನಾರೋಗ್ಯದ ದಿನವಿದು. ಶೈಕ್ಷಣಿಕ ವೃತ್ತಿಯವರಿಗೆ ಆರ್ಥಿಕವಾಗಿ ತೊಂದರೆಗಳು ಕಂಡು ಬರಲಿವೆ. ಮಂಗಲ ಕಾರ್ಯಗಳ ಮಾತುಕತೆಗೆ ಅಡ್ಡಿ ಆತಂಕಗಳು ಎದುರಾದವು. ಸಹನೆಯ ಅಗತ್ಯವಿದೆ.

ಮಕರ: ಅನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿಯು ಕಂಡುಬರುವುದು. ವಿದ್ಯಾರ್ಥಿಗಳಿಗಂತೂ ವಿದ್ಯಾಭ್ಯಾಸದಲ್ಲಿ ಸ್ವಪ್ರಯತ್ನದಿಂದಲೇ ಮುಂದುವರಿಕೆ ಅನಿವಾರ್ಯವಾದೀತು. ರಾಜಕೀಯದವರಿಗೆ ವಿರೋಧಗಳಿವೆ.

ಕುಂಭ: ಹಲವು ಬಾರಿ ಅವಮಾನ, ಅಪವಾದ ಪ್ರಸಂಗಗಳು ಎದುರಾದರೂ ಅದನ್ನು ಧೈರ್ಯಗುಂದದೆ ಎದುರಿಸುವುದು. ಮುಖ್ಯವಾಗಿ ನಿಮ್ಮ ಪ್ರಯತ್ನಬಲ, ಆತ್ಮವಿಶ್ವಾಸ, ಚಾಣಾಕ್ಷತನ ನಿಮ್ಮನ್ನು ಕಾಪಾಡಲಿದೆ.

ಮೀನ: ನಿಮ್ಮ ಕೆಲಸಕಾರ್ಯಗಳಿಗೆ ಪೂರಕವಾದ ವಾತಾವರಣವು ಕಂಡುಬರುವುದು. ಕೌಟುಂಬಿಕವಾಗಿ ಬಂಧುಮಿತ್ರರೇ ಶತ್ರುಗಳಾದಾರು. ನೀವು ದೃಢ ಮನಸ್ಸಿಂದ ಮುನ್ನಡೆದರೆ ನಿಮ್ಮ ಕೆಲಸವಾಗಲಿದೆ.

ಎನ್‌.ಎಸ್‌. ಭಟ್‌


Spread the love

About Laxminews 24x7

Check Also

ಚುನಾವಣೆ ಪ್ರಚಾರದ ವೇಳೆ ಮೋದಿ ಭಾವಚಿತ್ರ ಬಳಕೆ: ವಿಚಾರಣೆ ಏ.20ಕ್ಕೆ ಮುಂದೂಡಿಕೆ

Spread the loveಶಿವಮೊಗ್ಗ: ಲೋಕಸಭೆ ಚುನಾವಣೆ ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಚುನಾವಣೆ ಪ್ರಚಾರದ ವೇಳೆ ಹಾಗೂ ಸಭೆಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ