ನವದೆಹಲಿ, ಫೆ.15 (ಪಿಟಿಐ)- ಟೂಲ್ಕಿಟ್ ಡಾಕ್ಯುಮೆಂಟ್ ಪ್ರಕರಣದಲ್ಲಿ ಹವಾಮಾನ ಚಳವಳಿಗಾರ ದಿಶಾ ರವಿ ಅವರ ಬಂಧನವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಂಡಿಸಿದ್ದಾರೆ. ರವಿ ಅವರ ಮೇಲಿನ ನಡೆ ನಮ್ಮ ದೇಶದ ಪ್ರಜಾಪ್ರಭುತ್ವದ ಮೇಲೆ ಹಿಂದೆಂದು ಕಂಡಿರದ ಅಭೂತಪೂರ್ವ ದಾಳಿಯಾಗಿದೆ ಎಂದರು.
ರೈತರ ಪ್ರತಿಭಟನೆಗೆ ಸಂಬಂಸಿದ ಟೂಲ್ಕಿಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ 21 ವರ್ಷದ ಚಳವಳಿಗಾರನನ್ನು ಶನಿವಾರ ಬೆಂಗಳೂರಿನಿಂದ ಬಂಸಲಾಗಿದೆ. ದಿಶಾ ರವಿ ಬಂಧನವು ಪ್ರಜಾಪ್ರಭುತ್ವದ ಮೇಲೆ ಅಭೂತಪೂರ್ವ ದಾಳಿಯಾಗಿದೆ. ನಮ್ಮ ರೈತರಿಗೆ ಬೆಂಬಲ ವ್ಯಕ್ತಪಡಿಸುವುದು ಅಪರಾಧವಲ್ಲ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಖಾಸಗಿ ಕಾಲೇಜಿನಿಂದ ಬಿಸಿನೆಸ್ ಅಡ್ಮಿನಿಸ್ಟೇಷನ್ನಲ್ಲಿ ಪದವಿ ಪಡೆದಿರುವ ದಿಶಾ ರವಿ, ಫ್ರೈಡೇಸ್ ಫಾರ್ ಫ್ಯೂಚರ್ ಇಂಡಿಯಾ ಎಂಬ ಗುಂಪಿನ ಸ್ಥಾಪಕ ಸದಸ್ಯರಲ್ಲಿ ಒಬ್ಬ ಎಂದು ತಿಳಿದುಬಂದಿದೆ. ಕೆಲವು ವಿಮರ್ಶಕರು ಟೂಲ್ಕಿಟ್ ಅನ್ನು ಭಾರತದಲ್ಲಿ ಪ್ರತಿಭಟನೆಗಳನ್ನು ಉತ್ತೇಜಿಸುವ ಪಿತೂರಿಯ ಪುರಾವೆ ಇದಾಗಿದೆ ಎಂದು ಉಲ್ಲೇಖಿಸಿದ್ದಾರೆ.