ತುಮಕೂರು, ಜ.24: ತುಮಕೂರಿನ(Tumakuru) ಎಪಿಎಮ್ಸಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕೊಬ್ಬರಿ ಉಂಡೆ ಖರೀದಿ ಕೇಂದ್ರ ವೇದಿಕೆ ಕಾರ್ಯಕ್ರಮದಲ್ಲಿ ಸಚಿವೆಶೋಭಾ ಕರಂದ್ಲಾಜೆಭಾಷಣ ಮಾಡುತ್ತಿದ್ದ ವೇಳೆ ಸಂಸದ ಜಿಎಸ್ ಬಸವರಾಜ್(GS Basavaraj) ಅವರು ಗಡದ್ ನಿದ್ದೆಗೆ ಜಾರಿದ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ರೈತರಿಗೆ ನಿರಂತರವಾಗಿ ಸಮಸ್ಯೆ ಇದೆ.
ಸರಿಯಾದ ಸಮಯದಲ್ಲಿ ಮಳೆ ಬೆಳೆ ಬರಲ್ಲ, ಇದನ್ನ ಶತಮಾನಗಳಿಂದ ರೈತರು ಅನುಭವಿಸಿಕೊಂಡು ಬಂದಿದ್ದಾರೆ. ಸಣ್ಣ- ಮಧ್ಯಮ ರೈತರು ದೇಶದಲ್ಲಿ 80% ಹೆಚ್ಚು ಇದ್ದಾರೆ. ಜೊತೆಗೆ ನಮ್ಮದು ಮಳೆಯಾಧಾರಿತ ದೇಶ, ನಮಗೆ ಇನ್ನೂ ನೀರಾವರಿ ನೀಡಲು ಆಗ್ತಿಲ್ಲ. ಆ ನೀರನ್ನ ಸದುಪಯೋಗ ಕೂಡ ಮಾಡಿಕೊಂಡಿಲ್ಲ ಎಂದು ರೈತರ ಸಮಸ್ಯೆ ಕುರಿತು ಮಾತನಾಡುತ್ತಿದ್ದರು. ಈ ವೇಳೆ ಘಟನೆ ನಡೆದಿದೆ.