ಬಳ್ಳಾರಿ : ಬಿಜೆಪಿ (BJP) ತೊರೆದು ವೈಎಸ್ಆರ್ (YSRP) ಕಾಂಗ್ರೆಸ್ ಪಕ್ಷ ಸೇರಿರುವ ಮಾಜಿ ಸಂಸದೆ ಜೆ. ಶಾಂತಾ (J Shanta) ಕರ್ನಾಟಕ ರಾಜಕಾರಣಕ್ಕೆ ಗುಡ್ ಬೈ ಹೇಳಿದ್ದಾರೆ. ಮಾಜಿ ಸಚಿವ ಶ್ರೀರಾಮುಲು (Sriramulu) ಸೋದರಿಯಾಗಿರುವ ಶಾಂತಾ, ಆಂಧ್ರಪ್ರದೇಶದ (Andhrapradesh) ಸಿಎಂ ಜಗಮೋಹನ್ ರೆಡ್ಡಿ (CM Jagamohan reddy) ಸಮ್ಮುಖದಲ್ಲಿ ವೈಎಸ್ಆರ್ ಪಾರ್ಟಿ ಸೇರ್ಪಡೆಯಾಗಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಹಿಂದೂಪುರ ಕ್ಷೇತ್ರದಿಂದ ಶಾಂತಾ ಅವರಿಗೆ ವೈಎಸ್ಆರ್ ಟಿಕೆಟ್ ದೊರೆಯಲಿದೆ ಎನ್ನಲಾಗಿದೆ.
ಶ್ರೀರಾಮುಲು ಮತ್ತು ಜನಾರ್ಧನ ರೆಡ್ಡಿ ಇಬ್ಬರೂ ಸಹ ಜಗಮೋಹನ್ ರೆಡ್ಡಿ ಕುಟುಂಬದೊಡನೆ ಹಿಂದಿನಿಂದಲೂ ಸೌಹಾರ್ದತೆ ಹೊಂದಿದ್ದಾರೆ. 2009 ರಲ್ಲಿ ಬಿಜೆಪಿ ಯಿಂದ ಸ್ಪರ್ಧಿಸಿ ಶಾಂತಾ ಸಂಸದೆಯಾಗಿದ್ದರು.