ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ (Congress Govt) ಸರ್ಕಾರಿ ನಿವಾಸ ಮತ್ತು ಕಚೇರಿಗಳ ನವೀಕರಣದ ನೆಪದಲ್ಲಿ ದುಂದುವೆಚ್ಚ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಬಸನ ಗೌಡ ಪಾಟೀಲ ಯತ್ನಾಳ್, ಭೀಕರ ಬರಗಾಲದ ನಡುವೆಯೂ ಸಿಎಂ ಮತ್ತು ಸಚಿವರದ್ದು ಬಿಂದಾಸ್ ದುನಿಯಾ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಸಿಎಂ ಮತ್ತು ಸಚಿವರ ಸರ್ಕಾರಿ ನಿವಾಸ ನವೀಕರಣಕ್ಕೆ ದುಂದುವೆಚ್ಚ ಮಾಡಿರುವ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಎಕ್ಸ್ನಲ್ಲಿ ಪಟ್ಟಿ ಮಾಡಿ ಪೋಸ್ಟ್ ಮಾಡಿದ್ದಾರೆ.
ಸಿಎಂ ಮನೆ ನವೀಕರಣಕ್ಕೆ ₹3 ಕೋಟಿ, ಸಿಎಂ ಕಚೇರಿ ನವೀಕರಣಕ್ಕೆ ₹50 ಲಕ್ಷ ವೆಚ್ಚ, ಡಿಸಿಎಂ ಕಚೇರಿ ನವೀಕರಣಕ್ಕೆ ₹50 ಲಕ್ಷ ವೆಚ್ಚ, ಡಿಸಿಎಂ ಮನೆ ನವೀಕರಣಕ್ಕೆ ₹50 ಲಕ್ಷ ವೆಚ್ಚ ಮಾಡಲಾಗಿದೆ. ಡಾ. ಜಿ. ಪರಮೇಶ್ವರ್ ಕಚೇರಿ ನವೀಕರಣಕ್ಕೆ ₹15 ಲಕ್ಷ ವೆಚ್ಚ, ಡಾ. ಜಿ. ಪರಮೇಶ್ವರ್ ಮನೆ ನವೀಕರಣಕ್ಕೆ ₹35 ಲಕ್ಷ ವೆಚ್ಚ ಮಾಡಲಾಗಿದೆ.