Breaking News

”ಆಪರೇಷನ್ ಕಮಲದ ಬಗ್ಗೆ ಯಾರಾದರೂ ದೂರು ಕೊಟ್ಟರೆ ತನಿಖೆ ಮಾಡುತ್ತೇವೆ.: ಡಾ. ಜಿ. ಪರಮೇಶ್ವರ್

Spread the love

ಬೆಂಗಳೂರು: ”ಆಪರೇಷನ್ ಕಮಲದ ಬಗ್ಗೆ ಯಾರಾದರೂ ದೂರು ಕೊಟ್ಟರೆ ತನಿಖೆ ಮಾಡುತ್ತೇವೆ.

ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ” ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು. ಸದಾಶಿವ ನಗರ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ”ನಾನಿದರ ಬಗ್ಗೆ ಮಾತನಾಡಿಲ್ಲ. ಯಾರಾದರೂ ದೂರು ಕೊಟ್ಟರೆ ತನಿಖೆ ಮಾಡ್ತೇವೆ. ದೂರು ಪೆಸಿಫಿಕ್ ಆಗಿರಬೇಕು” ಎಂದರು.

ಅಸಮಾಧಾನ‌ ಇಲ್ಲ: ಪಕ್ಷದಲ್ಲಿ ಕಾರ್ಯಕರ್ತರ ಬೇಸರ ವಿಚಾರವಾಗಿ ಪ್ರತಿಕ್ರಿಯಿಸಿ, ”ಅಸಮಾಧಾನ ಆ ರೀತಿ ಯಾವುದೂ ಇಲ್ಲ. 33 ಮಂದಿ ಮಂತ್ರಿಗಳು ಇದ್ದಾರೆ. ಎಲ್ಲರೂ ಜಿಲ್ಲೆಗಳನ್ನು ಪ್ರತಿನಿಧಿಸುತ್ತಿದ್ದಾರೆ. ಬದಲಾವಣೆ ತರುತ್ತೇವೆಂದು ಅಧ್ಯಕ್ಷರು ಹೇಳಿದ್ದಾರೆ. ಬೋರ್ಡ್ ಕಾರ್ಪೊರೇಷನ್ ಬಗ್ಗೆ ಸಿಎಂ ಹೇಳಿದ್ದಾರೆ. ನೆಗ್ಲೆಟ್ ಮಾಡುವ ವಿಚಾರ ಯಾವುದೂ ಇಲ್ಲ. ಜೊತೆಗೆ ಕಾರ್ಯಕರ್ತರನ್ನು ಪರಿಗಣಿಸುತ್ತೇವೆ. ಸರ್ಕಾರದ ಭಾಗವಾಗಿ ಅವರನ್ನು ಮಾಡಿಕೊಳ್ತೇವೆ. ಪಕ್ಷಕ್ಕಾಗಿ ದುಡಿದವರು, ಹತ್ತಾರು ವರ್ಷ ಪಕ್ಷಕ್ಕೆ ಕೆಲಸ ಮಾಡಿದವರು, ಇಂತವರನ್ನು ನಿಗಮಗಳಿಗೆ ನೇಮಕ ಮಾಡುತ್ತೇವೆ. ಈಗಾಗಲೇ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆಯಲಾಗಿದೆ. ನೇಮಕ ಮಾಡುವ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ” ಎಂದರು.

ನಮ್ಮ ಮನೆ ವಿಷಯ ಇವರಿಗೆ ಏಕೆ ಬೇಕು?: ಭೋಜನಕೂಟಕ್ಕೆ ಅನೇಕ ವ್ಯಾಖ್ಯಾನ ವಿಚಾರವಾಗಿ ಮಾತನಾಡಿ, ”ಬಿಜೆಪಿಯವರೇ ಕೆಲ ಮುಖಂಡರು ಹೇಳ್ತಿರೋದು. ಅದನ್ನು ತಿರುಚೋದು, ಒಡೆದ ಬಾಗಿಲು, ಮೂರು ಬಾಗಿಲು ಅನ್ನೋದು ಅವರೇ. ಬಣಗಳನ್ನು ಸೃಷ್ಟಿ ಮಾಡೋದನ್ನು ಮಾಡ್ತಿದ್ದಾರೆ. ಇದೆಲ್ಲ ಅವರೇ ಮಾಡುತ್ತಿದ್ದಾರೆ. ಅದಕ್ಕೆ ನಾವು ಹೆಚ್ಚು ಪ್ರಾಮುಖ್ಯತೆ ಕೊಡೋದಿಲ್ಲ. ನಮ್ಮ ಮನೆ ವಿಷಯಗಳು ಇವರಿಗೆ ಯಾಕೆ ಬೇಕು? ಯಡಿಯೂರಪ್ಪ ಮನೆಯಲ್ಲಿ ಏನಾಗುತ್ತೆ. ಬೊಮ್ಮಾಯಿ ಮನೆಯಲ್ಲಿ ಏನಾಗುತ್ತದೆ ನಾವು ಕೇಳ್ತೇವಾ?” ಎಂದು ಪ್ರಶ್ನಿಸಿದರು.


Spread the love

About Laxminews 24x7

Check Also

1200 ರೈತರ ಆತ್ಮಹತ್ಯೆ: ಕಾಂಗ್ರೆಸ್ ಆಡಳಿತದಲ್ಲಿ ರೈತರ ಜೀವಕ್ಕಿಲ್ಲ ಬೆಲೆ- ಪ್ರಹ್ಲಾದ್ ಜೋಶಿ

Spread the love ಬೆಂಗಳೂರು ಜುಲೈ 26: ರಾಜ್ಯದಲ್ಲಿ ಕಳೆದ 15 ತಿಂಗಳಲ್ಲಿ 1200ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ