ಮೈಸೂರು: ವಾಹನ ತೆಗೆದುಕೊಳ್ಳಲು ಕೊಡಿಸಿದ ಸಾಲದ ಕಂತು ತುಂಬುವ ವಿಚಾರಕ್ಕೆ ಜಗಳ ನಡೆದು ಮಗನೇ ತಾಯಿಯನ್ನು ಜೀಪ್ ಹತ್ತಿಸಿ ಕೊಂದಿದ್ದಾನೆ.
ಆರೋಪಿ ಮಗನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸೂಳೆಕೋಟೆ (ಹನುಮಂತಪುರ) ಗ್ರಾಮದಲ್ಲಿ ಗುರುವಾರ ನಾಗಮ್ಮ (65) ಎಂಬ ಮಹಿಳೆಯನ್ನು ಆಕೆಯ ಮಗ ಹೇಮರಾಜ್(45) ಎಂಬಾತನೇ ಜೀಪ್ ಹತ್ತಿಸಿ ಕೊಲೆ ಮಾಡಿದ್ದ. ಹಣಕಾಸು ವಿಚಾರವಾಗಿ ತಾಯಿಯನ್ನು ಜೀಪ್ನಿಂದ ಗುದ್ದಿ ಕೊಲೆ ಮಾಡಿದ ಪಾಪಿ ಪುತ್ರನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.