ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿನ ಚಿಕಿತ್ಸೆಯಿಂದಾಗಿ ದೇಹಕ್ಕೆ ಹಾಗೂ ಆತ್ಮಕ್ಕೆ ರಕ್ಷಣೆಯೊಂದಿಗೆ ಸಂಸ್ಕಾರ ನೀಡಲಾಗುತ್ತದೆ. ಆಸೆ, ಕಾಮನೆಗಳು ನಿಯಂತ್ರಣಕ್ಕೆ ಬರುತ್ತವೆ. ಸುಧೃಡ ವ್ಯಕ್ತಿತ್ವ ನಮ್ಮದಾಗುತ್ತದೆ – ಡಾ. ಹೆಗ್ಗಡೆ
ಮುಂಜಾನೆಯಿಂದ ಸಂಜೆಯವರೆಗೆ ನಡೆದ ಶಿಬಿರದಲ್ಲಿ ಪತ್ರಕರ್ತರಿಗೆ ಮಸಾಜ್, ಫಸಿಯೋತೆರಪಿ ಮೊದಲಾದ ನ್ಯಾಚುರೋಪತಿ ಚಿಕಿತ್ಸೆಗಳನ್ನು ನೀಡಲಾಯಿತಲ್ಲದೆ, ಆಸ್ಪತ್ರೆಯ ವಿವಿಧ ವಿಭಾಗಗಳ ವೀಕ್ಷಣೆ, ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ, ಧ್ಯಾನ, ಯೋಗವನ್ನು ಪರಿಚಯಿಸಲಾಯಿತು.