Home / ಜಿಲ್ಲೆ / ಬೆಂಗಳೂರು / ನಟ ಪುನೀತ್‌ಗೆ ಅವಮಾನ : ಸಾರಿ ಕೇಳಿದ ನಿರ್ದೇಶಕ ಪ್ರೇಮ್‌, ಒಪ್ಪದ ಅಪ್ಪು ಪ್ರೇಮಿಗಳು

ನಟ ಪುನೀತ್‌ಗೆ ಅವಮಾನ : ಸಾರಿ ಕೇಳಿದ ನಿರ್ದೇಶಕ ಪ್ರೇಮ್‌, ಒಪ್ಪದ ಅಪ್ಪು ಪ್ರೇಮಿಗಳು

Spread the love

ಬೆಂಗಳೂರು: ಇತ್ತೀಚಿಗೆ ನಟಿ ರಕ್ಷಿತಾ ಅವರ ತಮ್ಮ ನಾಯಕ ನಟನಾಗಿ ಅಭಿನಯ ಮಾಡುತ್ತಿರುವ ಸಿನಿಮಾವೊಂದರ ಸಂಭ್ರಮದ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆಯಲ್ಲಿ ಅಲ್ಲಿದ್ದ ನಟಿ ರಕ್ಷಿತಾ , ನಟಿ ರಚಿತರಾಮ್‌, ಆಂಕರ್‌ ಅಕುಲ್‌ ಬಾಲಾಜಿ ಮಾಡಿರುವ ಯಡವಟ್ಟು ಈಗ ವಿವಾದಕ್ಕೆ ಕಾರಣವಾಗಿದೆ.

ಹೌದು, ಚಿತ್ರತಂಡದವರಿಂದ ಇದೇ ವೇಳೇ ನಟ ಪುನೀತ್‌ ಅವರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಿದರು ಅರ್ಪಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಭಾವಚಿತ್ರದ ಎದುರು ಶಾಪೆಂನ್‌ ಬಾಟಲ್‌ ಒಪನ್‌ ಮಾಡಿದ್ದು, ಈಗ ವಿವಾದವನ್ನು ಹುಟ್ಟುಹಾಕಿದ್ದು, ನಟಿ ರಕ್ಷಿತಾ , ನಟಿ ರಚಿತರಾಮ್‌, ಆಂಕರ್‌ ಅಕುಲ್‌ ಬಾಲಾಜಿ ಅವರ ನೈತಿಕತೆಯನ್ನು ಜನತೆ ಪ್ರಶ್ನೆ ಮಾಡುತ್ತಿದ್ದಾರೆ. ಅದರಲ್ಲೂ ನಟಿ ರಚಿತರಾಮ್‌ ನಡೆದುಕೊಂಡ ರೀತಿ ಕೂಡ ವಿವಾದಕ್ಕೆ ಕಾರಣವಾಗಿದ್ದು, ಬಾಟಲ್‌ನಿಂದ ಗ್ಲಾಸ್‌ಗೆ ಶಾಪೆಂನ್‌ ಹಾಕೊಂಡು ವೇದಿಕೆಯಿಂದಲ್ಲೇ ಅಲ್ಲಿ ನೆರೆದಿದ್ದವರತ್ತ ನಗುತ್ತ ಕೈ ಚಾಚಿದ್ದಾರೆ.

ಇವೆಲ್ಲದರ ನಡುವೆ ಪಾರ್ಟಿ ಮಾಡುವುದು ಆಯಾ ಸಿನಿಮಾ ತಂಡದವರಿಗೆ ಬಿಟ್ಟ ಬಿಟ್ಟ ವಿಚಾರವಾಗಿದೆ, ಆದರೆ ಇಡೀ ಕರುನಾಡು ಪುನೀತ್‌ ಅವರನ್ನು ಕಳೆದುಕೊಂಡು ಸೂತಕದಲ್ಲಿ ಇರುವ ಈ ಸಮಯದಲ್ಲಿ ನಟಿ ರಕ್ಷಿತಾ , ನಟಿ ರಚಿತರಾಮ್‌, ಆಂಕರ್‌ ಅಕುಲ್‌ ಬಾಲಾಜಿ ನಡೆಯ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸಿದ್ದು, ಕಿಡಿಕಾರುತ್ತಿದ್ದಾರೆ.

ಈ ನಡುವೆ ಕಾರ್ಯಕ್ರಮದಲ್ಲಿ ಆಗಿರೋ ಕೆಲಸಕ್ಕೆ ನಟ ಪ್ರೇಮ್‌ ಸಾರಿ ಕೇಳಿದ್ದಾರೆ, ಆದರೆ ಇಲ್ಲಿ ತನಕ ಕಾರ್ಯಕ್ರಮದ ವೇದಿಕೆ ಮೇಲೆ ಇದ್ದವರು ಯಾವುದೇ ರೀತಿಯಲ್ಲಿ ಹೇಳಿಕೆ ನೀಡದೇ ಇರುವುದು ಅಪ್ಪು ಅಭಿಮಾನಿಗಳಲ್ಲಿ ಇನ್ನೂ ಹೆಚ್ಚಿನ ಕೋಪ ತರಿಸಿದ್ದು, ರಾಜಕುಮಾರನಿಗೆ ಇದೆಂತ ಅವಮಾನ ಅಂತ ಪ್ರಶ್ನೆ ಮಾಡುತ್ತಿದ್ದಾರೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ