ಗೋಕಾಕ: ಗೋಕಾಕ ಅಂದ್ರೇನೆ ಪವರ್ಫುಲ್ ಅನ್ನೋದು ಎಲ್ಲಾಜನರಿಗೆ ಗೊತ್ತು, ಹೇಗೆ ಕರದಂಟು ಫೇಮಸ್ ಇದೆಯೋ ಹಾಗೆ ಅಲ್ಲಿನ ರಾಜಕೀಯ ಕೂಡ ಹಾಗೆ ಇದೆ ಆದ್ರೆ ಇಲ್ಲೊಂದು ನಿನ್ನೆಯ ಮಳೆಯ ಆಗಮನಕ್ಕೆ ನಡೆದ ಘಟನೆ ವಿಚಿತ್ರ ವಾದರು ನಿಜ
ನಮ್ಮ ಗೋಕಾಕ ತಾಲೂಕಿನ ಮಿನಿ ವಿಧಾನಸೌಧ ಎಷ್ಟು ವೈಜ್ಞಾನಿಕವಾಗಿ ಕಟ್ಟಿದ್ದಾರೆಂದರೆ. ಮಳೆ ಬಂದರೆ ಸಾಕು ಕಾರಿಡಾರ, ಮೆಟ್ಟಿಲು, ಟೈಲ್ಸ್ ಎಲ್ಲ ಮಳೆರಾಯ ಸ್ವಚ್ಛ ಮಾಡತಾನೆ.
ಕೆಲಸದ ಗುಣಮಟ್ಟದ ಮೇಲೆ ಗಮನ ಇರದೆ, ಕಮಿಷನ್ನ ಮೇಲೆ ಮಾತ್ರವೆ ಗಮನ ಇದ್ದರೆ ಹೀಗೆ ಆಗುವುದು. ಇದಕ್ಕೆ ಅರಭಾವಿ ಕ್ಷೇತ್ರವು ಹೊರತಲ್ಲ. ಇಂತಹ ಸಮಯದಲ್ಲಿ ಕಛೇರಿ ಕೆಲಸಕ್ಕೆ ಬಂದವರು ಜಾರಿ ಬಿದ್ದು ಸತ್ತರೆ ಅದಕ್ಕೆ ಹೊಣೆ ಯಾರು)
ಅಧಿಕಾರಿಗಳೆ ಕಟ್ಟಡ ಕಟ್ಟುವ ಸಮಯದಲ್ಲಿ ತಾವು ಇರಲಿಲ್ಲ ಎನ್ನುವುದು ಗೋತ್ತು. ಆದರೂ, ಆ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ತಮಗಿದೆ. ದಯವಿಟ್ಪು ಅದನ್ನ ಮಾಡಿ.
ಈ ರೀತಿ ಜನ್ ತಮ್ಮ ಫೇಸ್ಬುಕ್ ವಾಲನಲ್ಲಿ ಅಂಕಣ ಗಳನ್ನ ಬರೆದು ತಮ್ಮ ವಾಲನಲಿ ಪೋಸ್ಟ್ ಮಾಡುತ್ತಿದ್ದಾರೆ ಇನ್ನು ಇದನ್ನ ನಮ್ಮ ತಹಸೀಲ್ದಾರ್ ಸಾಹೇಬ್ರ ಎಸ್ಟರ್ ಮಟ್ಟಿಗೆ ಗಮನ ಹರಿಸಿರುವ ಪ್ರಯತ್ನ ಮಾಡುತ್ತಾರೋ ಕಾದು ನೋಡಬೇಕಿದೆ..