ಬೆಳಗಾವಿ: ಮಹಾದಾಯಿ ವಿಚಾರವಾಗಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು ಒಳ್ಳೆಯದು. ಮುಂದಿನ ಸ್ಟೇಪ್ ಸರ್ಕಾರ ಸರಿ ಮಾಡಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಇಂದು ನಗರದ ಗೃಹ ಕಚೇರಿಯಲ್ಲಿ ಮಾತನಾಡಿ ಮಹಾದಾಯಿ ವಿವಾದವನ್ನು ಗೋವಾ ಸರ್ಕಾರ ಅಷ್ಟು ಸುಲಭವಾಗಿ ಬಿಟ್ಟು ಕೊಡುವುದಿಲ್ಲ. ನಾವು ಕೂಡ ಕಾನೂನಾತ್ಮಕವಾಗಿ ಪೈಟ್ ಮಾಡಬೇಕು. ಇಷ್ಟೇ ಆದರೆ ನಮಗೆ ನ್ಯಾಯ ಸಿಗುತ್ತೆ ಅಂತಲ್ಲಾ ಇನ್ನೂ ಅರಣ್ಯ ಹಾಗೂ ಪರಿಸರ ಇಲಾಖೆಯಿಂದ ಕೆಲಸ ಆಗಬೇಕಿದೆ ಎಂದರು.
ಬಹಳ ದಿನಗಳಿಂದ ಡಿಮಾಂಡ್ ಇತ್ತು ರಮೇಶ್ ಜಾರಕಿಹೊಳಿ ಅಥವಾ ಯಾರಿಂದಲೂ ಒಟ್ಟಿನಲ್ಲಿ ಕೆಲಸ ಆಗಿದೆ. ಇಷ್ಟಕ್ಕೆ ಮುಗಿದಿಲ್ಲ ಇನ್ನೂ ಬಹಳಷ್ಟು ಸಮಸ್ಯೆ ಇದೆ. ಎಲ್ಲವನ್ನೂ ಸರಿ ಮಾಡಿಕೊಂಡ ಹೆಜ್ಜೆ ಇಟ್ಟರೆ ಒಳ್ಳೆಯದು ಎಂದು ರಮೇಶ್ ಜಾರಕಿಹೊಳಿಗೆ ಸಹೋದರ ಸತೀಶ ಜಾರಕಿಹೊಳಿ ಸಲಹೆ ನೀಡಿದರು.
ಅಧಿಸೂಚನೆ ಹೊರಡಿಸಿದ್ದು ಈಗ ಪ್ರಾರಂಭ ಇನ್ನೂ ಕೆಲಸ ಮಾಡಬೇಕಿದೆ ಎಂದರು.