ಎರಡನೇ ಹಂತದ ವಿಸ್ತರಣೆಯ ಲಾಕ್ಡೌನ್ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಸಿಬ್ಬಂದಿಗೆ ಇಂದು ಕೆಲವು ಸೂಚನೆಗಳನ್ನು ನೀಡಿದ್ದಾರೆ.
ಬೆಂಗಳೂರು: ಕೊರೋನಾ ನಿಯಂತ್ರಣ ಸಲುವಾಗಿ ಹೇರಲಾಗಿದ್ದ 21 ದಿನಗಳ ಲಾಕ್ಡೌನ್ ನಾಳೆಗೆ ಮುಕ್ತಾಯಗೊಳ್ಳಲಿದೆ. ಆದರೂ ಮಾರಕ ಸೋಂಕು ಹತೋಟಿಗೆ ಬಾರದ ಕಾರಣಕ್ಕೆ ಲಾಕ್ಡೌನ್ ಈ ತಿಂಗಳ ಕೊನೆಯವರೆಗೂ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ.
ಎರಡನೇ ಹಂತದ ವಿಸ್ತರಣೆಯ ಲಾಕ್ಡೌನ್ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಸಿಬ್ಬಂದಿಗೆ ಇಂದು ಕೆಲವು ಸೂಚನೆಗಳನ್ನು ನೀಡಿದ್ದಾರೆ.
- ಎಲ್ಲಾ ಸಿಬ್ಬಂದಿಗಳು ಒಳ್ಳೆಯ ಕೆಲಸ ಮಾಡಿ, ಎಲ್ಲರ ಕಡೆಯಿಂದ ಪ್ರಶಂಸೆ ಪಡೆದಿದ್ದೇವೆ.
- ಇನ್ನು ಉಳಿದ ದಿನಗಳಲ್ಲಿ ಕೂಡ ನಾವು ಹೀಗೆ ಕೆಲಸ ಮಾಡಬೇಕು, ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು.
- ಮಾಧ್ಯಮದವರಿಗೆ, ಹಣ್ಣು ತರಕಾರಿ, ದಿನಸಿ ತರುವವರಿಗೆ ಸಮಸ್ಯೆ ಮಾಡಬಾರದು.
- ಗೂಡ್ಸ್ ವಾಹನಗಳಿಗೆ ಯಾವುದೇ ತೊಂದರೆ ಆಗಬಾರದು, ಖಾಲಿ ವಾಹನ ಇರಲಿ, ತುಂಬಿದ ವಾಹನ ಇರಲಿ. ಅವರಿಗೆ ಸಮಸ್ಯೆ ಮಾಡಬಾರದು.
- ಮಾರ್ಕೆಟ್ಗಳಿಗೆ ಬರುವ ಹಮಾಲಿಗಳಿಗೆ ತೊಂದರೆ ಕೊಡಬಾರದು.
- ಕೆಲವರು ಪಾಸ್ ಇಲ್ಲದೆ ತುರ್ತಾಗಿ ಓಡಾಡಬೇಕಾಗಿರುತ್ತೆ, ಅಂತಾ ಸಮಯದಲ್ಲಿ ಸಾಮಾಜ್ಯಜ್ಞಾನ ಬಳಸಿ ನಿರ್ಧಾರ ಕೈಗೊಳ್ಳಬೇಕು. ಗರ್ಭಿಣಿಯರು, ಅನಾರೋಗ್ಯಕ್ಕೆ ಒಳಗಾದವರು ಬಂದಾಗ ಸಹನೆಯಿಂದ ಮಾತನಾಡಿಸಿ ಸಹಾಯ ಮಾಡಿ.
- ಎಟಿಎಂ ಕೆಲಸದವರಿಗೆ, ಸರ್ಕಾರಿ ಅಧಿಕಾರಿಗಳು, ಪ್ರವೈಟ್ ಸೆಕ್ಯೂರಿಟಿ ಎಸೆನ್ಸಿಯಲ್ ಸರ್ವಿಸ್ ಅವರಿಗೆ ತೊಂದರೆ ಕೊಡಬಾರದು.
- ನಕಲಿ ಪಾಸ್ ಮಾಡಿಕೊಂಡು ಓಡಾಡುವರ ವಿರುದ್ದ ಸೂಕ್ತ ಕ್ರಮ ಜರುಗಿಸಿ. ಹಾಗೂ ಲಾಕ್ ಡೌನ್ ಮುಗಿದ ಬಳಿಕ ವಾಹನ ವಾಪಸ್ ನೀಡಲು ದಾಖಲಾತಿಗಳನ್ನು ಮಾಡಿಕೊಳ್ಳಿ.
- ಸಾರ್ವಜನಿಕರಿಗೆ ನಮ್ಮ ಮೇಲೆ ನೀರಿಕ್ಷೆ ಇದೆ. ನೀವು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೀರ. ನಿಮ್ಮ ಆರೋಗ್ಯ ಕಾಪಾಡಿಕೊಂಡು ಕೆಲಸ ಮಾಡಿ.