ಬೆಳಗಾವಿಯ ಐ.ಟಿ.ಸಿ.ವೆಲ್ ಕಮ್ ಹೋಟೆಲನಲ್ಲಿ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೊಸಾಯಿಟಿ ಲಿ., (ಮಲ್ಟಿ- ಸ್ಟೇಟ್) ಮುಖ್ಯ ಸಿಬ್ಬಂದಿಗಳ (HOD) ಹಾಗೂ ಶಾಖಾ ವ್ಯವಸ್ಥಾಪಕರಿಗೆ 2 ದಿನದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರವನ್ನು ಡಾ.ಡಿ.ಜಿ.ಕುಲಕರ್ಣಿ ಉದ್ದೇಶಿಸಿ ಮಾತನಾಡಿದರು.
ಬ್ಯಾಂಕ್ ಸಿಬ್ಬಂದಿಗೆ ವ್ಯಕ್ತಿತ್ವ ವಿಕಸನ (Personality Development) ತರಬೇತಿಯು ಸಂಸ್ಥೆಯ ಸದಸ್ಯರಿಗೆ ಸೇವೆಯನ್ನೂ ನೀಡಲು ಬಹಳ ಮುಖ್ಯವಾಗಿದೆ.
ಸಹಕಾರ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೇಗೆ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.ಈ ತರಬೇತಿಯು ಕೇವಲ ಸಂವಹನ ಕೌಶಲ್ಯಕ್ಕೆ ಸೀಮಿತವಾಗದೆ,ಒತ್ತಡ ನಿರ್ವಹಣೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ.ಮನುಷ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿಯುತವಾಗಿರಲು ಮತ್ತು ಕೆಲಸದ ಒತ್ತಡದ ಸಂದರ್ಭಗಳಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು. ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು (Mental Health) ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ, ಮೆದುಳಿನ ಶಕ್ತಿಯನ್ನು ಕಾಪಾಡಿಕೊಳ್ಳುವುದು ಸಹ ಅಷ್ಟೇ ಮುಖ್ಯವಾಗಿದೆ.ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ನಾಯಕತ್ವದ ಗುಣ ಅಳವಡಿಸಿಕೊಂಡು ಒಳ್ಳೆಯ ಜೀವನ ನಡೆಸುವ ಕುರಿತು ಅತ್ಯುತ್ತಮ ಮಾಹಿತಿ ನೀಡಿದರು.
Laxmi News 24×7