Breaking News
Home / ಅಂತರಾಷ್ಟ್ರೀಯ / ಭೀಮಾತೀರದ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿದ್ದ ಐವರು ಅರೆಸ್ಟ್ ; ಬಂಧಿತರಿಂದ ಎರಡು ಕಂಟ್ರಿ ಪಿಸ್ತೂಲ್ ವಶಕ್ಕೆ..!

ಭೀಮಾತೀರದ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿದ್ದ ಐವರು ಅರೆಸ್ಟ್ ; ಬಂಧಿತರಿಂದ ಎರಡು ಕಂಟ್ರಿ ಪಿಸ್ತೂಲ್ ವಶಕ್ಕೆ..!

Spread the love

 

 

ವಿಜಯಪುರ : ನವೆಂಬರ್ 2 ರಂದು ಭೀಮಾತೀರದ ಕುಖ್ಯಾತಿಯ ಮಹಾದೇವ ಭೈರಗೊಂಡ ಮೇಲೆ ನಡೆದಿದ್ದ ಶೂಟೌಟ್  ಪ್ರಕರಣಕ್ಕೆ ಸಂಭಂದಿಸಿದಂತೆ ವಿಜಯಪುರ. ಪೋಲೀಸರು ಮತ್ತೆ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಹೌದು ನವೆಂಬರ್ 2 ರಂದು ನಡೆದಿದ್ದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಯಾಶೀನ್ ರಮಜಾನಸಾಬ್ ದಂದರಗಿ,  ಕರೆಪ್ಪ ಸೊನ್ನದ ,  ಸಿದ್ದರಾಯ ಬೊಮ್ಮನಜೋಗಿ ,  ಸಚೀನ ಮಾನವರ್ , ಚಡಚಣ. ಮೂಲದ ರವಿ ಬಂಡಿ ಬಂಧಿತ ಆರೋಪಿಗಳು, ಬಂಧಿತ ಆರೋಪಿಗಳಿಂದ  ಐದು ಜೀವಂತ ಗುಂಡು , ಎರಡು ಕಂಟ್ರಿ ಪಿಸ್ತೂಲ್ , ನಾಲ್ಕು ಮೊಬೈಲ್, ಒಂದು ಮಚ್ಚು , ಕೃತ್ಯಕ್ಕೆ ಬಳಸಿದ ಒಂದು ಅಟೋರಿಕ್ಷಾ ವನ್ನು ಜಪ್ತಿ ಮಾಡಿದ್ದಾರೆ,

ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು ಏಳು ಜನ ಆರೋಪಿಗಳ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ ಎಂದು ವಿಜಯಪುರ  ಪೋಲಿಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್ ತಿಳಿಸಿದರು, ಹಾಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿಬ್ಬಂದಿಗಳ ಕಾರ್ಯವೈಖರಿಗೆ ಎಸ್ಪಿ ಅನುಪಮ ಅಗರವಾಲ್ ಶ್ಲಾಘನೆ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ