Breaking News
Home / new delhi / TRP ಲಿಸ್ಟ್​ ರಿಲೀಸ್​: ಟಾಪ್​ 5 ಲಿಸ್ಟ್​ನಲ್ಲಿರೋ ಕನ್ನಡದ ಧಾರಾವಾಹಿಗಳು ಯಾವುವು..?

TRP ಲಿಸ್ಟ್​ ರಿಲೀಸ್​: ಟಾಪ್​ 5 ಲಿಸ್ಟ್​ನಲ್ಲಿರೋ ಕನ್ನಡದ ಧಾರಾವಾಹಿಗಳು ಯಾವುವು..?

Spread the love

ಧಾರಾವಾಹಿಯ ತಂಡದವರು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಹೊಸ ವರ್ಷದ ಮೊದಲ ವಾರದ ಟಿಆರ್​ಪಿ ಲಿಸ್ಟ್​ ಹೊರ ಬಂದಿದ್ದು, ನಿಮ್ಮ ಕುತೂಹಲದ ಕಣ್ಗಳಿಗೆ ಉತ್ತರ ಇಲ್ಲಿದೇ. ಒಂದೊಳ್ಳೆಯ ಕಂಟೆಂಟ್​ನ್ನ ಜನರಿಗೆ ತಲುಪಿಸಲು ಸಾಕಷ್ಟು ಪರಿಶ್ರಮಪಡುವ ಧಾರಾವಾಹಿಗಳು ಏನೇ ಎಫರ್ಟ್​ ಹಾಕಿದ್ರು ಕೊನೆಯದಾಗಿ ಆ ಸೀರಿಯಲ್​ ಎಷ್ಟರಮಟ್ಟಿಗೆ ವೀಕ್ಷಕರು ಮನ ಗೆದ್ದಿದೆ ಅನ್ನೋದು ಇಂಪಾರ್ಟಂಟ್​. ಟಾಪ್​ 5 ಲಿಸ್ಟ್​ನಲ್ಲಿ ಯಾವೆಲ್ಲ ಸೀರಿಯಲ್​ಗಳು ಸ್ಥಾನ ಪಡೆದುಕೊಂಡಿವೆ ಎಂಬುದ್ರ ಬಗ್ಗೆ ಮಾಹಿತಿ ಇಲ್ಲಿದೇ ನೋಡಿ. ​

ಪುಟ್ಟಕ್ಕನ ಮಕ್ಕಳು ಪ್ರಾರಂಭವಾದ ಮೊದಲ ವಾರದಿಂದ ಕೂಡ ನಂಬರ್ ಒನ್​​ ಸ್ಥಾನವನ್ನ ಯಾರಿಗೂ ಬಿಟ್ಟು ಕೊಡದೇ ಕಿರುತೆರೆಯಲ್ಲಿ ಅದ್ಧೂರಿತನದಿಂದ ಸಾಗುತ್ತಿದ್ದಾಳೆ ಪುಟ್ಟಕ್ಕ. ಸದ್ಯ ಟಿಆರ್​ಪಿ ಲಿಸ್ಟ್​ನಲ್ಲಿ ಮತ್ತೊಮ್ಮೆ ಮೇಲುಗೈ ಸಾಧಿಸಿರುವ ಪುಟ್ಟಕ್ಕನ ಮಕ್ಕಳು 12.4 ರೇಟಿಂಗ್​ ಪಡೆದು ರಾರಾಜಿಸುತ್ತಿದ್ದಾಳೆ.

 

ಇನ್ನೂ ಗಟ್ಟಿಮೇಳ ಧಾರಾವಾಹಿ ದಿನಕೊಂದು ಟ್ವಿಸ್ಟ್​ ಜೊತೆಗೆ ಬಜಾರಿ ಅಮುಲ್ಯಾ ಹಾಗೂ ವೇದಾಂತ್​ ಮುನಿಸು, ಪ್ರೀತಿ ಪ್ರೇಮದ ಸನ್ನಿವೇಶಗಳು ವೀಕ್ಷಕರನ್ನ ಸೇಳೆಯುತ್ತಿವೆ. ಸದ್ಯ ತಾಯಿ ಮಕ್ಕಳ ಎಮೋಷನಲ್​ ಕಂಟೆಂಟ್​ಗೆ ಜನರು ಫಿದಾ ಆಗಿದ್ದು, ಪ್ರತಿಯೊಂದು ಸೀನ್​ ಸಖತ್​ ಬ್ಯೂಟಿಫುಲ್​ ಆಗಿ ಮೂಡಿ ಬರುತ್ತಿವೆ.ವಶಿಷ್ಠ ಕುಟುಂಬದ ಆಧಾರ ಸ್ತಂಭ ವೈದೇಹಿ ಸುಹಾಸಿನಿಯ ಕುತಂತ್ರದಿಂದ ತನ್ನ ಇಡೀ ಕುಟುಂಬವನ್ನ ಕಳೆದುಕೊಂಡಿದ್ದು, ಮತ್ತೇ ತನ್ನ ಸುಂದರವಾದ ಪರಿವಾರವನ್ನ ನಿರ್ಮಾಣ ಮಾಡಿಕೊಳ್ಳಲು ಪಡಬಾರದ ಕಷ್ಟ ಪಡುತ್ತಿದ್ದಾಳೆ. ಇತ್ತ ಸುಹಾಸಿನಿಗೆ ವೈದೇಹಿ ವಾಪಸ್​ ಬಂದಿರುವ ಸುಳಿವು ಸಿಕ್ಕಿದೆ. ಮತ್ತೊಂದು ಕಡೆ ವೇದಾಂತ್​​ ಅಜ್ಜಿ ಆಸ್ಪತ್ರೆ ಸೇರಿದ್ದಾರೆ. ತುಂಬಾನೇ ಇಂಟ್ರಸ್ಟಿಂಗ್​ ಆಗಿ ಸಾಗುತ್ತಿದ್ದು, ಇದೇ ಕಾರಣಕ್ಕೆ 11.9 ಟಿವಿಆರ್​ ಪಡೆದು 2ನೇ ಸ್ಥಾನಗಳಿಸಿದೆ ಗಟ್ಟಿಮೇಳ.

 

ಇನ್ನೂ ಮೂರನೇ ಸ್ಥಾನವನ್ನ ಹಿಟ್ಲರ್​ ಕಲ್ಯಾಣ ಅಲಂಕರಿಸಿದೆ. ಲೀಲಾ-ಎಜೆ ಬಾಳಲ್ಲಿ ಪ್ರೇಮದ ತಂಗಾಳಿ ಸುಳಿಯುತ್ತಿದ್ದು, ಇಬ್ಬರ ಪೇರ್​​ ಜನರಿಗೆ ಸಖತ್​​ ಇಷ್ಟ ಆಗಿದೆ. ಸದ್ಯ ಲೀಲಾಳನ್ನ ದುರ್ಗಾ ಕಿಡ್ನಾಪ್​ ಮಾಡಿಸಿದ್ದಳು. ನಮ್ಮ ಹಿರೋ ಎಜೆ ಲೀಲಾ ರಕ್ಷಣೆ ಮಾಡಿ ಮನೆಗೆ ವಾಪಸ್​ ಕರೆದುಕೊಂಡು ಬಂದಿದ್ದಾನೆ. ಲೀಲಾ ದುರ್ಗಾ ಕುತಂತ್ರವನ್ನ ಎಜೆ ಮುಂದೆ ಸಾಬಿತು ಪಡೆಸುತ್ತಾಳ ಅನ್ನೋದೇ ಸದ್ಯದ ಟ್ವಿಸ್ಟ್​.

ನಾಲ್ಕನೇ ಸ್ಥಾನದಲ್ಲಿ ಜೊತೆ ಜೊತೆಯಲಿ ಇದೆ. ರಾಜನಂದಿನಿ ರಹಸ್ಯ, ಆರ್ಯನ ಅರ್ಧ ಸತ್ಯಗಳ ನಡುವೆ ಗೊಂದಲದಲ್ಲಿದ್ದಾಳೆ ಅನು. ಈ ಎಲ್ಲಾ ರಹಸ್ಯ, ಒದ್ದಾಟಗಳನ್ನ ಪಕ್ಕಕ್ಕಿಟ್ಟು ಸಂಕ್ರಾಂತಿ ಹಬ್ಬದ ಸಂಭ್ರಮವನ್ನ ಸವಿಯುತ್ತಿ ವರ್ಧನ್​ ಹಾಗೂ ಸಿರಿಮನೆ ಕುಟುಂಬ.

 

ಇನ್ನೂ ಐದನೇ ಸ್ಥಾನವನ್ನ ಸತ್ಯ ಅಲಂಕರಿಸಿದ್ದಾಳೆ. ದಿವ್ಯಾಳ ದುರಾಸೆಗೆ ತನ್ನ ಪ್ರೀತಿಯನ್ನ ಬಲಿಕೊಟ್ಟಿದ್ದಾಳೆ ನಮ್ಮ ಸತ್ಯ. ಇತ್ತ ಅಮುಲ್​ ಬೇಬಿ ದಿವ್ಯಾ-ಸತ್ಯಾ ನಡುವೆ ಸಿಲುಕಿದ್ದಾನೆ. ತ್ರಿಕೊನ ಪ್ರೇಮದಲ್ಲಿ ಸಾಗುತ್ತಿರುವ ಕತೆ ಪ್ರೇಕ್ಷಕರಿಗೆ ಹತ್ತಿರವಾಗಿದೆ. ಹೀಗೇ ಎಲ್ಲಾ ಧಾರಾವಾಹಿ ಕೂಡ ನಾ ಮುಂದು ತಾ ಮುಂದು ಎಂಬಂತೆ ಸಖತ್​ ಸ್ಪೀಡ್​ನಲ್ಲಿ ಮುನ್ನಗ್ತಾಯಿದ್ದು.. ಟಿಆರ್​ಪಿ ಕೂಡ ಅದೇ ಸ್ಪೀಡ್​ನಲ್ಲಿ ಓಡ್ತಾಯಿದೆ.


Spread the love

About Laxminews 24x7

Check Also

ಮೋದಿ ಪ್ರಧಾನಿಯಾದರೆ ಪಿಒಕೆ ಭಾರತಕ್ಕೆ: ಜಗದೀಶ ಶೆಟ್ಟರ

Spread the love ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಮೇಲೆ ಭಾರತಕ್ಕೆ ಕಪ್ಪುಚುಕ್ಕೆಯಾಗಿರುವ ಪಾಕ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ