Breaking News
Home / ಜಿಲ್ಲೆ / ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದ ಶ್ರೀಮತಿ ಮಂಜುಳ NV:………

ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದ ಶ್ರೀಮತಿ ಮಂಜುಳ NV:………

Spread the love

ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದ ಶ್ರೀಮತಿ ಮಂಜುಳ NV
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನೆಹರು ಯುವ ಕೇಂದ್ರ (ಭಾರತ ಸರ್ಕಾರ )ಮತ್ತು ಸುವರ್ಣ ಚಾರಿಟಬಲ್ ಟ್ರಸ್ಟ್ (ರಿ) ವತಿಯಿಂದ ಸಮಾಜ ಸೇವೆಯನ್ನು ಗುರುತಿಸಿ “ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗಿದೆ .
ಈ ಪ್ರಶಸ್ತಿ ನ ಮಾಜಿ ಕೇಂದ್ರ ಸಚಿವರಾದ ಶ್ರೀ ಕೆಎಚ್ ಮುನಿಯಪ್ಪ ಅವರು ಮತ್ತು ನೆಹರು ಯುವ ಕೇಂದ್ರದ ಅಧ್ಯಕ್ಷರು ಪ್ರಶಸ್ತಿಯನ್ನು ನೀಡಿದರು .
ಶ್ರೀಮತಿ ಮಂಜುಳ ಆದಿವಾಸಿ ಜನಾಂಗದ ಸೋಲಿಗ ಸಮುದಾಯದ ಹೆಣ್ಣುಮಗಳು ,ಅತ್ಯಂತ ಕಡುಬಡತನದಿಂದ ಬೆಳೆದ ಮಂಜುಳಾ ಅವರು ಬಿಎ ಪದವೀಧರರು,,ಕಿಂಗ್ ಫಿಷರ್ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿ ತರಬೇತಿ ಪಡೆದು ಸೇವೆ ಸಲ್ಲಿಸಿದ್ದಾರೆ .ಹಲವಾರು ಕೆಲಸಗಳು ಅವರನ್ನು ಅರಸಿಕೊಂಡು ಬಂದರು ಅವರು ಸಮಾಜದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲೆ ಮಕ್ಕಳ ಮೇಲೆ ದೌರ್ಜನ್ಯ ಅತ್ಯಾಚಾರ ಶೋಷಣೆಯಂತಹ ಸಮಸ್ಯೆಗಳಿಗೆ ಮಹಿಳಾ ಪರವಾಗಿ ಹೋರಾಟಗಳನ್ನು ಮಾಡುತ್ತಾ ಶ್ರೀ ಶಕ್ತಿ ಗುಂಪುಗಳನ್ನು ಹಳ್ಳಿಗಳಲ್ಲಿ ಬಲಪಡಿಸಿದರು,ಮೊದಲ ಹೆಜ್ಜೆ ಎಂಬಂತೆ ಅಖಿಲ ಕರ್ನಾಟಕ ಆದಿವಾಸಿ ಕೂಲಿ ಕಾರ್ಮಿಕರ ರಕ್ಷಣಾ ವೇದಿಕೆಯಲ್ಲಿ ಅಧ್ಯಕ್ಷರಾಗಿ ಸಮುದಾಯದ ಸಮಸ್ಯೆಗಳ ಪರವಾಗಿ ಹೋರಾಟಕ್ಕೆ ನಿಂತರು,,ತದನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್ ನಲ್ಲಿ ಜಿಲ್ಲಾ ಬೆಂಗಳೂರು ಪ್ರಧಾನ ಕಾರ್ಯದರ್ಶಿಯಾಗಿ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು ,,ಸಮಾಜದಲ್ಲಿ ಮಹಿಳೆಯರ ಪರವಾಗಿ ಅಖಿಲ ಕರ್ನಾಟಕ ಮಹಿಳಾ ಘರ್ಜನೆ(ರಿ) ಎಂಬ ಸಂಘಟನೆಯನ್ನು ಮಾಡಿ ಅಂದಿನ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರಿಂದ ಸಂಘಟನೆಯ ಲಾಂಛನವನ್ನು ಉದ್ಘಾಟಿಸಿದರು ,ಇಂದು ಈ ಸಂಘಟನೆ ಕರ್ನಾಟಕದಲ್ಲಿ ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿದೆ ಆ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾಗಿ ಮಂಜುಳಾ ಅವರು ಮಹಿಳೆಯರಿಗೆ ಅವರ ನೋವುಗಳಿಗೆ ಸ್ಪಂದಿಸಿ ಎಲ್ಲರ ಜನಮನ ಗೆದ್ದಿದ್ದಾರೆ ,,ಒಬ್ಬ ಸಾಮಾನ್ಯ ಆದಿವಾಸಿ ಜನಾಂಗದ ಮಹಿಳೆ ಈ ಮಟ್ಟಕ್ಕೆ ತಲುಪಿರುವುದು ಹೆಮ್ಮೆಯ ವಿಷಯ ,ಮಂಜುಶ್ರೀ ಸಾಂಸ್ಕೃತಿಕ ಸೇವಾ ಸಂಸ್ಥೆ ಮಾಡಿ ಕರ್ನಾಟಕದ ಪರಂಪರೆ, ಸಂಸ್ಕೃತಿ, ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತೆರೆ ಮರೆಯಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವ ಒಂದಷ್ಟು ಪ್ರತಿಭೆಗಳನ್ನು ಗುರುತಿಸಿ ಕರ್ನಾಟಕದ ಪ್ರತಿ ಜಿಲ್ಲೆಯಿಂದ ಆ ಪ್ರತಿಭೆಗಳಿಗೆ ಸೇವಾ ರತ್ನ ,ಮತ್ತು ಮಹಿಳಾ ಸಾಧಕ ರತ್ನ ಪ್ರಶಸ್ತಿ ಕೊಟ್ಟು ಗೌರವಿಸಿದ್ದಾರೆ ,,ಇದೇ ಸಂಸ್ಥೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗ ಸಂಸ್ಥೆಯ ವತಿಯಿಂದ ಆ ಭಾಗಕ್ಕೆ ಹಲವಾರು ಸಾಮಗ್ರಿಗಳನ್ನು ಮಹಿಳೆಯರಿಗೆ ಮಕ್ಕಳಿಗೆ ವೃದ್ಧರಿಗೆ ಬಟ್ಟೆಗಳನ್ನು ನೀಡಿ ಅವರ ನೋವಿಗೆ ಸ್ಪಂದಿಸಿದೆ ,2018 ರಲ್ಲಿ H D ಕೋಟೆ ವಿಧಾನಸಭಾ ಕ್ಷೇತ್ರಕ್ಕೆ ತನ್ನ ಸಮುದಾಯದ ಪರವಾಗಿ ಧ್ವನಿ ಎತ್ತಲು ಸಮಾಜವಾದಿ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ,,


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ