ಬೆಂಗಳೂರು: ನಾರಿಶಕ್ತಿ ಮಹಿಳಾ ಮೀಸಲಾತಿ ಬಿಲ್ಗೆ ವಿಪಕ್ಷಗಳ ವಿರೋಧಿಸಿದ್ದರ ಪರಿಣಾಮ ಪಶ್ಚಿಮ ಬಂಗಾಳ ಚುನಾವಣೆಯಲ್ಲೇ ಗೊತ್ತಾಗಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಈ ಮೂಲಕ ಮಸೂದೆಗೆ ವಿರೋಧ ವ್ಯಕ್ತಪಡಿಸಿದವರಿಗೆ ಚುನಾವಣೆಯಲ್ಲಿ ಸೋಲಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನಲ್ಲಿ ಅವರು ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿದರು. ಈ ವೇಳೆ, ಬಿಲ್ ಪಾಸ್ ಆಗದೇ ಇರೋದು ಬಹಳ ಬೇಸರ ತಂದಿದೆ. ಬಿಲ್ ಪಾಸ್ ಆದರೆ ಮೋದಿ ಅವರಿಗೆ ಕ್ರೆಡಿಟ್ ಸಲ್ಲುತ್ತೆ. ಮೋದಿ ಅವರಿಗೆ ಹೆಸರು ಬರುತ್ತೆ ಎನ್ನುವ ಏಕೈಕ ಕಾರಣಕ್ಕೆ ವಿರೋಧಿಸಲಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಮಹಿಳಾ ಮೀಸಲಾತಿಯನ್ನು 2029ರ ಚುನಾವಣೆಗೆ ನೀಡೋ ಅವಕಾಶವನ್ನು ಕಾಂಗ್ರೆಸ್ ಪಾರ್ಟಿ ವಿರೋಧ ಮಾಡಿದೆ. ದಕ್ಷಿಣ ಭಾರತಕ್ಕೆ ಇದರಿಂದ ಬಹಳ ಉಪಯೋಗ ಆಗುತ್ತಿತ್ತು. ಕರ್ನಾಟಕದಲ್ಲಿ 42 ಕ್ಷೇತ್ರಗಳು ಆಗುತ್ತಿದ್ದವು. ಇದಕ್ಕೆ ಕೂಡ ಕಾಂಗ್ರೆಸ್ ಪಕ್ಷ ದಕ್ಷಿಣ ಭಾರತ ಮತ್ತು ಕರ್ನಾಟಕದ ವಿರೋಧಿ ನೀತಿಯನ್ನ ಮಾಡಿದೆ ಎಂದು ಕಿಡಿಕಾರಿದ್ದಾರೆ.
ದೇಶದಲ್ಲಿ ಮಹಿಳೆಯರು ವಿಪಕ್ಷಗಳ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಚುನಾವಣೆಯಲ್ಲೇ ಇದರ ಪರಿಣಾಮ ಏನು ಎಂಬುದು ತಿಳಿಯಲಿದೆ ಎಂದಿದ್ದಾರೆ.
Laxmi News 24×7