Home / ನವದೆಹಲಿ / ನಾಳೆಯಿಂದ ಹೊಸ ಲಾಕ್‍ಡೌನ್ – ಪ್ಲ್ಯಾನ್ ಹೇಗಿರಬಹುದು? …..

ನಾಳೆಯಿಂದ ಹೊಸ ಲಾಕ್‍ಡೌನ್ – ಪ್ಲ್ಯಾನ್ ಹೇಗಿರಬಹುದು? …..

Spread the love

ನವದೆಹಲಿ: ಕೋವಿಡ್ 19 ಲಾಕ್‍ಡೌನ್ 3.0 ಇಂದು ಅಂತ್ಯವಾಗಲಿದ್ದು, ಸೋಮವಾರದಿಂದ ಹೊಸ ಲಾಕ್‍ಡೌನ್ 4.0 ಜಾರಿಯಾಗುತ್ತಿದೆ. ಎಲ್ಲ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿರುವ ಕೇಂದ್ರ ಇಂದು ಹೊಸ ಮಾರ್ಗಸೂಚಿ ಪ್ರಕಟ ಮಾಡಲಿದೆ.

ಹೊಸ ಲಾಕ್‍ಡೌನ್ ಹೊಸ ರೀತಿಯಲ್ಲಿ ಇರಲಿದೆ ಅಂತ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದು, ಕೇಂದ್ರ ಸರ್ಕಾರದ ಲೆಕ್ಕಾಚಾರ ಹೇಗಿರಲಿದೆ ಎನ್ನುವುದೇ  ಕುತೂಹಲ. ಯಾಕಂದ್ರೆ, ಈಗಾಗಲೇ 3 ಲಾಕ್‍ಡೌನ್‍ಗಳಲ್ಲೂ ಬೇಕಾಬಿಟ್ಟಿ ಓಡಾಡ್ತಿದ್ದಾರೆ. ಜೊತೆಗೆ, ಲಾಕ್‍ಡೌನ್ 3ರಲ್ಲಿ ಮತ್ತಷ್ಟು ಸಡಿಲ ಮಾಡಿರುವ ಕಾರಣ ಕೊರೋನಾ ವೈರಸ್ ಸಂಖ್ಯೆಯೋ ಮೂರ್ನಾಲ್ಕು ಪಟ್ಟು ವೇಗವಾಗಿ ಏರಿಕೆ ಕಾಣುತ್ತಿದೆ.

ಬಿಗಿ ಕ್ರಮ ಕೈಗೊಳ್ಳುತ್ತಿದ್ದರೂ ಕಾರ್ಮಿಕರ ವಲಸೆ ನಿಂತಿಲ್ಲ. ತಮ್ಮೂರುಗಳನ್ನು ತಲುಪಲು ಹರಸಾಹಸವೇ ಮಾಡಿ ಸಂಚಾರ ಮಾಡುತ್ತಿರುವ ಪ್ರವಾಸಿ ಕಾರ್ಮಿಕರು ಸಾವಿಗೀಡಾಗ್ತಿದ್ದಾರೆ. ಈ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಕೇಂದ್ರ ಸರ್ಕಾರ ಪರಿಗಣಿಸಿದೆ. ಹೀಗಾಗಿ, ಲಾಕ್‍ಡೌನ್ 4.0 ಲೆಕ್ಕಾಚಾರಗಳು, ಪ್ಲಾನ್‍ಗಳೇ ವಿಭಿನ್ನವಾಗಿರೋದ್ರಲ್ಲಿ ಎರಡು ಮಾತಿಲ್ಲ.

ಲಾಕ್‍ಡೌನ್ 4.0 ಪ್ಲಾನ್ ಏನು?
ಪ್ಲಾನ್ 1: ಇನ್ನೆರೆಡು ವಾರ ಲಾಕ್‍ಡೌನ್ ವಿಸ್ತರಣೆ – ಮೇ 31ವರೆಗೆ ವಿಸ್ತರಣೆ..?
ಪ್ಲಾನ್ 2: ಕಂಟೈನ್ಮೆಂಟ್ ಝೋನ್‍ಗಷ್ಟೇ ಲಾಕ್‍ಡೌನ್ (ರೆಡ್‍ಝೋನ್‍ಗಳಿಗೂ ಲಾಕ್‍ಡೌನ್ ವಿನಾಯ್ತಿ ಸಾಧ್ಯತೆ)
ಪ್ಲಾನ್ 3: ರಾತ್ರಿಯ ಕರ್ಫ್ಯೂ ಅವಧಿ ವಿಸ್ತರಣೆ ಸಾಧ್ಯತೆ (ರಾತ್ರಿ 7 ಗಂಟೆ ಬದಲಿಗೆ ರಾತ್ರಿ 10ರಿಂದ ಬೆಳಗ್ಗೆ 7ವರೆಗೆ ವಿಸ್ತರಣೆ ಸಾಧ್ಯತೆ)
ಪ್ಲಾನ್ 4: ಝೋನ್‍ಗಳ ನಿರ್ಧಾರ ಅಧಿಕಾರ ರಾಜ್ಯಗಳಿಗೆ ಸಾಧ್ಯತೆ
ಪ್ಲಾನ್ 5: ವಲಸೆ ಕಾರ್ಮಿಕರ ಹಿತದೃಷ್ಟಿಗಾಗಿ ಮತ್ತಷ್ಟು ಶ್ರಮಿಕ್ ರೈಲು

ಯಾವುದಕ್ಕೆ ವಿನಾಯಿತಿ?
ಈ ಪ್ಲಾನ್ ಹೊರತು ಪಡಿಸಿ, ಸೋಮವಾರದಿಂದ ಶುರುವಾಗಲಿರೋ ಹೊಸ ಲಾಕ್‍ಡೌನ್‍ನಲ್ಲಿ ಈಗಾಗಲೇ ಚಾಲ್ತಿಯಲ್ಲಿರೋ ವಿನಾಯ್ತಿಗಳೂ ಸೇರಿದಂತೆ ಮತ್ತಷ್ಟು ಸಡಿಲಿಕೆ ಮಾಡೋ ಸಾಧ್ಯತೆ ಇದೆ. ಯಾಕೆಂದರೆ ಪ್ರಧಾನಿ ಜೊತೆ ನಡೆದ ವಿಡಿಯೋ ಸಂವಾದದಲ್ಲಿ ಆರ್ಥಿಕತೆ ದೃಷ್ಟಿಯಿಂದ ಲಾಕ್‍ಡೌನ್ ತೆರವಿಗೆ ಮನವಿ ಮಾಡಿದ್ದರು. ಕೇವಲ ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಲಾಕ್‍ಡೌನ್ ಬಿಗಿಗೊಳಿಸಿ ಉಳಿದೆಡೆ ರಿಲೀಫ್ ಕೊಡುವಂತೆ ಕೇಳಿಕೊಂಡಿದ್ದರು.

ಲಾಕ್‍ಡೌನ್ ಮುಂದುವರಿಸಲು ಬಿಹಾರ, ಉತ್ತರ ಪ್ರದೇಶ, ಅಸ್ಸಾಂ, ಒಡಿಶಾ, ಮಹಾರಾಷ್ಟ್ರ, ಗುಜರಾತ್ ಮನವಿ ಮಾಡಿದರೆ, ಆಂಧ್ರ, ಮಣಿಪುರ, ಅರುಣಾಚಲ ಪ್ರದೇಶ ಲಾಕ್‍ಡೌನ್ ತೆರವು ಮಾಡುವಂತೆ ಮನವಿ ಮಾಡಿದ್ದವು. ಲಾಕ್‍ಡೌನ್ ಮುಂದುವರಿಸಿ ಆದರೆ ಕಂಟೈನ್ಮೆಂಟ್ ಆಧಾರದ ಮೇಲೆ ಮುಂದುವರಿಸುವಂತೆ ದೆಹಲಿ, ಕರ್ನಾಟಕ, ಪಂಜಾಬ್, ತಮಿಳುನಾಡು, ಉತ್ತರಾಖಂಡ ಸರ್ಕಾರಗಳು ಮೋದಿಗೆ ಕೇಳಿಕೊಂಡಿದ್ದವು.

ಮುಖ್ಯಮಂತ್ರಿಗಳ ಈ ಸಲಹೆ ಜೊತೆಗೆ, ಖುದ್ದು ಪ್ರಧಾನಿ ಮೋದಿ, ಈ ಕೊರೋನಾ ವೈರಸ್ ಅಷ್ಟು ಬೇಗ ದೂರ ಆಗಲ್ಲ. ಹಾಗಾಗಿ, ಕೊರೋನಾ ಜೊತೆಗೆ ಬದುಕೋದನ್ನು ಕಲಿಬೇಕು ಅಂತ ಮೊನ್ನೆಯ ಭಾಷಣದಲ್ಲಿ ಹೇಳಿದ್ದರು.

ಹೊಸ ಲಾಕ್‍ಡೌನ್ ನಿರೀಕ್ಷೆಗಳು ಏನು?
* ಖಾಸಗಿ, ಸರ್ಕಾರಿ ಬಸ್‍ಗಳ ಓಡಾಟ
* ದೇಶಿಯ ವಿಮಾನ, ಕೆಲ ರೈಲುಗಳ ಸಂಚಾರ ಆರಂಭ (ನಾಳೆಯಿಂದಲೇ ಪೂರ್ಣ ಪ್ರಮಾಣದಲ್ಲಿ ಸಂಚಾರವಿಲ್ಲ)
* ಆಟೋ, ಕ್ಯಾಬ್‍ಗಳ ಸಂಚಾರ
* ಆಪ್ ಆಧಾರಿತ ಆಟೋ, ಕ್ಯಾಬ್ ಸೇವೆ
* ರೆಡ್‍ಝೋನ್‍ಗಳಲ್ಲಿ ಸಲೂನ್, ಬ್ಯೂಟಿ ಪಾರ್ಲರ್, ಸ್ಪಾಗೆ ಅನುಮತಿ


* ಜಿಮ್, ಫಿಟ್ನೆಸ್ ಸೆಂಟರ್,  ಗಾಲ್ಫ್ ಕ್ಲಬ್ ಓಪನ್
* ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಸಿಬ್ಬಂದಿ ಪ್ರಮಾಣ ಹೆಚ್ಚಳ
* ಎಲ್ಲಾ ಮಾದರಿಯ ಅಂಗಡಿ-ಮುಂಗಟ್ಟು ತೆರೆಯಲು ಅವಕಾಶ (ಸಮಯ ನಿಗಧಿಯೊಂದಿಗೆ ಅನುಮತಿ)
* ಸಮ-ಬೆಸ ಆಧಾರದ ಮೇಲೆ ಮಾರುಕಟ್ಟೆ ತೆರೆಯಲು ಅವಕಾಶ (ರಾಜ್ಯ ಸರ್ಕಾರದ ನಿರ್ಣಯಕ್ಕೆ ಬಿಡಬಹುದು)
* ಇ-ಕಾಮರ್ಸ್ ಮೂಲಕ ತುರ್ತು ಅವಶ್ಯಕವಲ್ಲದ ವಸ್ತುಗಳ ಮಾರಾಟ
* ಬೈಕ್‍ನಲ್ಲಿ ಒಬ್ಬರು, ಕಾರಿನಲ್ಲಿ ಡ್ರೈವರ್ ಬಿಟ್ಟು ಇಬ್ಬರ ಪ್ರಯಾಣ ನಿಯಮ ವಿಸ್ತರಣೆ
* ಎಲ್ಲ ಮಾದರಿಯ ಕೈಗಾರಿಕೆ, ಹಾರ್ಡ್‍ವೇರ್ ಉದ್ಯಮಕ್ಕೆ ಅವಕಾಶ (ಮುನ್ನೆಚ್ಚರಿಕೆ ನಿಯಮಗಳ ಪಾಲನೆ ಕಡ್ಡಾಯ )


* ನಗರ ಭಾಗದಲ್ಲಿ ಕಟ್ಟಡ ನಿರ್ಮಾಣ ಆರಂಭಿಸಬಹುದು (ಕಾರ್ಮಿಕ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಹಾಗೂ ಹೊರಗಡೆಯಿಂದ ಕಾರ್ಮಿಕರನ್ನು ಕರೆತರಬಾರದು)
* ಕೊರಿಯರ್ ಪೋಸ್ಟಲ್ ಸೇವೆ ವಿಸ್ತರಣೆ
* ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಶೇ.33 ರಿಂದ 50ಕ್ಕೆ ಉದ್ಯೋಗಿಗಳ ಹೆಚ್ಚಳ ಮಾಡುವುದು
* 10 ವರ್ಷದೊಳಗಿನ ಮಕ್ಕಳು, 60ವರ್ಷ ಮೇಲ್ಪಟ್ಟ ವೃದ್ಧರು ಮನೆಯಿಂದ ಆಚೆ ಬರುವಂತಿಲ್ಲ (ವೈದ್ಯಕೀಯ ಅನಿವಾರ್ಯತೆ ಹೊರತುಪಡಿಸಿ)
* ಖಾಸಗಿ ಆಸ್ಪತ್ರೆಗಳ ಓಪಿಡಿ ಕಾರ್ಯ ನಿರ್ವಹಣೆಗೆ ಅವಕಾಶ

ಯಾವುದಕ್ಕೆ ನಿರ್ಬಂಧ ಮುಂದುವರಿಕೆ?
* ಥಿಯೇಟರ್, ಶಾಪಿಂಗ್ ಮಾಲ್, ಕಾಂಪ್ಲೆಕ್ಸ್
* ದೇಗುಲ, ಜಾತ್ರೆ, ಸಂತೆ, ಉತ್ಸವ ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮ
*  ಎಲ್ಲ ರೈಲುಗಳ ಓಡಾಟ, ನಮ್ಮ ಮೆಟ್ರೋ ರೈಲು ಓಡಾಟಕ್ಕೂ ಅನುಮತಿ ಅನುಮಾನ
* ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗಷ್ಟೇ ಅವಕಾಶ ಮುಂದುವರಿಕೆ
* ಜೂನ್ ಬಳಿಕವಷ್ಟೇ ಶಾಲಾ-ಕಾಲೇಜು ಆರಂಭ


Spread the love

About Laxminews 24x7

Check Also

‘ಅಂಬರೀಶ್ ಆಶೀರ್ವಾದದಿಂದ ಮಗನ ಸಿನಿಮಾ ಬಿಡುಗಡೆ’: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ

Spread the love ಮಂಡ್ಯ: ಇಂದು ಕನ್ನಡಿಗರ ಮೆಚ್ಚಿನ ನಟ ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಮಂಡ್ಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ