Home / ಜಿಲ್ಲೆ / ಸುಳ್ಳು ದಾಖಲೆ ಪಡೆದ ಚನ್ನರಾಜ ಹಟ್ಟಿಹೋಳಿ,ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಸಿದಗೌಡ ಮೋದಗಿ

ಸುಳ್ಳು ದಾಖಲೆ ಪಡೆದ ಚನ್ನರಾಜ ಹಟ್ಟಿಹೋಳಿ,ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಸಿದಗೌಡ ಮೋದಗಿ

Spread the love

ಸುಳ್ಳು ದಾಖಲೆ ಪಡೆದ ಚನ್ನರಾಜ ಹಟ್ಟಿಹೋಳಿ,ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಸಿದಗೌಡ ಮೋದಗಿ

 ನಕಲಿ ರಹವಾಸಿ ದಾಖಲೆ ಪಡೆದ ಚನ್ನರಾಜ ಹಟ್ಟಿಹೋಳಿ/ಅಧಿಕಾರ ಇಲ್ಲದಿದ್ದರು ಗ್ರಾ.ಪಂ.ಸದಸ್ಯನಿಂದ ಪ್ರಮಾಣ ಪತ್ರದ ಮೇಲೆ ಸಹಿ/ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿದ್ದಗೌಡ ಮೋದಗಿ ಆಗ್ರಹ

ಮೋದಗಾ ಗ್ರಾಮದ ರಹವಾಸಿಯೆಂದು ಸುಳ್ಳು ರಹವಾಸಿ ಪ್ರಮಾಣಪತ್ರ ಪಡೆದು, ಮೋದಗಾ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವ ಚನ್ನರಾಜ ಹಟ್ಟಿಹೋಳಿ ಅವರು ತಕ್ಷಣ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಭಾರತೀಯ ಕೃಷಿಕ ಸಮಾಜದ (ಸಂ) ದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಆಗ್ರಹಿಸಿದರು.

 

ಶುಕ್ರವಾರದಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾನಾಪೂರ ತಾಲೂಕಿನ ಚಿಕ್ಕಹಟ್ಟಿಹೋಳಿ ಗ್ರಾಮದವರಾಗಿರುವ ಚನ್ನರಾಜ ಹಟ್ಟಿಹೋಳಿ ಅವರು ತಾವು ಮೋದಗಾ ಗ್ರಾಮದ ರಹವಾಸಿಯೆಂದು ಸುಳ್ಳು ಪ್ರಮಾಣಪತ್ರ ಪಡೆದಿದ್ದಾರೆ. ರಹವಾಸಿ ಪ್ರಮಾಣಪತ್ರ ನೀಡುವದು ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಆದರೆ, ಚನ್ನರಾಜ ಹಟ್ಟಿಹೋಳಿ ಅವರು ಮೋದಗಾ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಲ್ಲಿಸಿರುವ ರಹವಾಸಿ ಪ್ರಮಾಣಪತ್ರದ ಮೇಲೆ ಮೋದಗಾ ಗ್ರಾಮ ಪಂಚಾಯತಿಯ ಸದಸ್ಯ ಬಾಬು ಕಾಳೆ ಎಂಬುವವರು ಸಹಿ ಮಾಡಿದ್ದಾರೆ. ಸುಳ್ಳು ರಹವಾಸಿ ಪ್ರಮಾಣಪತ್ರ ಪಡೆದಿರುವ ಚನ್ನರಾಜ ಹಟ್ಟಿಹೋಳಿ, ರಹವಾಸಿ ಪ್ರಮಾಣಪತ್ರದ ಮೇಲೆ ಸಹಿ ಮಾಡಿರುವ ಗ್ರಾಮ ಪಂಚಾಯತಿಯ ಸದಸ್ಯ ಬಾಬು ಕಾಳೆ, ರಹವಾಸಿ ಪ್ರಮಾಣಪತ್ರ ಪರಿಶೀಲಿಸದೆ ಸಂಘದ ಸದಸ್ಯತ್ವ ನೀಡಿರುವ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮಹಾನಗರ ಪೋಲಿಸ್ ಆಯುಕ್ತರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿಯ ಸಿಇಒ ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ವಿವರಿಸಿದರು.

 


ಚನ್ನರಾಜ ಹಟ್ಟಿಹೋಳಿ ಅವರು ಸುಳ್ಳು ರಹವಾಸಿ ಪ್ರಮಾಣಪತ್ರ ಸಲ್ಲಿಸಿ, ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿ 2019 ರಲ್ಲಿ ನಡೆದ ಸಂಘದ ಚುನಾವಣೆಯಲ್ಲಿ ಮೋದಗಾ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಯುವ ಉದ್ಯಮಿಗಳಾಗಿರುವ ಚನ್ನರಾಜ ಹಟ್ಟಿಹೋಳಿ ಅವರು ಪ್ರಾರಂಭದಲ್ಲಿಯೇ ಕಳ್ಳ ಮಾರ್ಗ ಅನುಸರಿಸಿರುವದು ಸರಿ ಅಲ್ಲ ಎಂದರು.

ನಕಲಿ ದಾಖಲೆಗಳು ಪಡೆಯುವದು ಮತ್ತು ಕೊಡುವದು ಕಾನೂನಿನ ಪ್ರಕಾರ ಅಕ್ಷಮ್ಯ ಅಪರಾದ. ಇಲ್ಲಿ ಕಾನೂನು ಮತ್ತು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ತಪ್ಪಿತಸ್ಥರ ವಿರುದ್ಧ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಚನ್ನರಾಜ ಹಟ್ಟಿಹೋಳಿ ಅವರು, ಗೌರವಯುತವಾಗಿ ಕೃಷಿ ಪತ್ತಿನ ಸಹಕಾರ ಸಂಘದಿಂದ ನಿರ್ಗಮಿಸಬೇಕು ಎಂದು ಆಗ್ರಹಿಸಿರುವ ಅವರು, ಈ ದಿಸೆಯಲ್ಲಿ ಕಠಿಣ ಕ್ರಮಗಳು ಜರುಗದಿದ್ದರೇ, ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟ ಪಡಿಸಿದರು.

ಇನ್ನು ಚನ್ನರಾಜ ಹಟ್ಟಿಹೋಳಿ ಅವರು ಸಹಕಾರ ಕ್ಷೇತ್ರದ ದಿಗ್ಗಜರಾಗುವ ಮತ್ತು ರಾಜಕೀಯವಾಗಿ ಬೆಳೆಯಲು ಅನುಸರಿಸಿರುವ ಮಾರ್ಗ ಸರಿ ಅಲ್ಲ. ಸಹಕಾರ ಕ್ಷೇತ್ರವು ಅಕ್ರಮಗಳಿಂದ ಮುಕ್ತವಾಗಿರಬೇಕು ಎಂಬುದೆ ತಮ್ಮ ಉದ್ದೇಶ ಎಂದರು.ಪತ್ರಿಕಾ ಗೋಷ್ಠಿಯಲ್ಲಿ ಸಂಘಟನೆಯ ಮಾಧ್ಯಮ ವಕ್ತಾರ ಆರ್.ಎಸ್.ದರ್ಗೆ, ಪದಾಧಿಕಾರಿಗಳಾಗಿರುವ ಸುರೇಶ ಮರಲಿಂಗಣ್ಣವರ, ಅಡಿವೆಪ್ಪ ಕುಂದರಗಿ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ