ಗೋಕಾಕ: ಕೊರಾನಾ ವಿರುದ್ದ ಹೋರಾಡಲು ಗೋಕಾಕದಲ್ಲಿ ನಗರಸಭೆ ಸದಸ್ಯೆ ಲಕ್ಷ್ಮಿ ಬಸವರಾಜ ದೇಶನೂರ ಇವರ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಸಭೆ ನಡೆಯಿತು.
ನಗರಸಭೆಯ ಟಾಸ್ಕ ಪೋರ್ಸ ಅಧಿಕಾರಿಯಾದ ಎಂ,ಎಚ್,ಗಜಾಕೋಶ ಇವರು ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ಹಲವು ಇಲಾಖೆ ಮತ್ತು ಸ್ಥಳಿಯ ಸದಸ್ಯರನ್ನು ಒಳಗೊಂಡು ಟಾಸ್ಕ್ ಪೊರ್ಸ ರಚನೆಯಾಗಿರುತ್ತದೆ. ಇದರ ಉದ್ದೇಶ ಕೊರಾನಾ ರೋಗ ಹರಡದಂತೆ ರೋಗದ ವಿರುದ್ದ ಹೊರಾಟ ಮಾಡುವುದು ಹೊರತು ರೋಗಿಯ ವಿರುದ್ದ ಅಲ್ಲ.
ಅದಕ್ಕಾಗಿ ಯಾರು ಕೊರಾನಾಗೆ ಭಯ ಪಡುವ ಅವಶ್ಯವಿಲ್ಲ. ತಾವೆಲ್ಲರೂ ಅನಾವಶ್ಯವಾಗಿ ಹೊರಗಡೆ ಹೊಗದೆ ಮನೆಯಲ್ಲಿಯೆ ಇದ್ದು, ವೃದ್ದರನ್ನು ಹಾಗೂ ಸಣ್ಣ ಮಕ್ಕಳನ್ನು ಹೊರಗಡೆ ಹೊಗದಂತೆ ತೆಡೆದರೆ ಸೋಂಕು ನಿಯಂತ್ರಣಕ್ಕೆ ತರಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್, ಕೆ,ಹಳ್ಳೂರ, ಮುಖಂಡರಾದ ಪ್ರವೀಣ ಚುನಮರಿ, ಬಸವರಾಜ, ಶೇಗುಣಸಿ ಪ್ರಮೋದ ಕುರಬೇಟ ಇತರರು ಇದ್ದರು.