Breaking News

ಫುಟ್‌ಪಾತ್ ತೆರವಿಗೆ ಜನರು ಸಹಕಾರ ಕೊಡಬೇಕು: ಪರಮೇಶ್ವರ್‌

Spread the love

ಬೆಂಗಳೂರು: ನಗರದಲ್ಲಿ ಮಾಡ್ತಿರೋ ಫುಟ್‌ಪಾತ್‌ ತೆರವಿಗೆ ಜನರು ಸಹಕಾರ ಕೊಡಬೇಕು ಅಂತ ಡಿಸಿಎಂ ಪರಮೇಶ್ವರ್  ಮನವಿ ಮಾಡಿದ್ದಾರೆ.

ಶಿವಾಜಿ ನಗರದಲ್ಲಿ  ಫುಟ್‌ಪಾತ್ ತೆರವು ಮಾಡಲು ಹೋದ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಫುಟ್‌ಪಾತ್ ತೆರವಿಗೆ ಜನ ಸಹಕಾರ ಕೊಡಬೇಕು. ಫುಟ್‌ಪಾತ್ ಅಂದರೆ ಏನು? ಫುಟ್‌ಪಾತ್ ಅನ್ನು ಅಂಗಡಿ ಪಾತ್ ಮಾಡಿದ್ರೆ ಹೇಗೆ? ಅಂತ ಪ್ರಶ್ನೆ ಮಾಡಿದ್ದಾರೆ. 

ಶಿವಾಜಿ ನಗರದಲ್ಲಿ ತೆರವು ಮಾಡಲು ಹೋದಾಗ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ್ರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ದೇಶದಲ್ಲಿ ಕಾನೂನು ಇಲ್ಲವಾ? ಯಾರೇ ಆದ್ರು ಹಲ್ಲೆ ಮಾಡೋಕೆ ಅಧಿಕಾರ ಇಲ್ಲ. ಪೊಲೀಸರು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ತಾರೆ ಎಂದಿದ್ಧಾರೆ.

ಬಾಂಗ್ಲಾ ನಿವಾಸಿಗಳಿಗೆ ಪಿಆರ್‌ಸಿ ಕೊಡೋಕಾಗುತ್ತಾ?
ಅಕ್ರಮ ಬಾಂಗ್ಲಾ ಮತ್ತು ಪಾಕಿಸ್ತಾನ ಪ್ರಜೆಗಳಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಡಲು ಸರ್ಕಾರ ಮುಂದಾಗಿದೆ ಎಂಬ ಬಿಜೆಪಿ ಆರೋಪಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನೇ ಹಿಂದೆ ಸದನದಲ್ಲಿ ಬಾಂಗ್ಲಾದೇಶ ಸೇರಿ ಬೇರೆ ಬೇರೆ ವಿದೇಶದಿಂದ ಅಕ್ರಮವಾಗಿ ಇಲ್ಲಿಗೆ ಬಂದಿದ್ದಾರೆ ಉತ್ತರ ಕೊಟ್ಟಿದ್ದೆ. ಈ ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಟ್ಟರೆ ನಮ್ಮವರು ಯಾರು ಅಂತ ಗೊತ್ತಾಗುತ್ತದೆ. ಬಾಂಗ್ಲಾದೇಶದವರಿಗೆ ಕೊಡಲು ಆಗುತ್ತದೆಯಾ? ಎಂದು ಕೇಳಿದ್ದಾರೆ.

ಯಾರು 10 ವರ್ಷದಿಂದ ಇಲ್ಲಿ ಇಲ್ಲವೋ ಅವರನ್ನ ಹೊರಗೆ ಹಾಕ್ತೀವಿ. ನಾವು ಪೌರತ್ವ ಕೊಡ್ತಿಲ್ಲ. ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಡ್ತಾ ಇದ್ದೇವೆ. ಪೌರತ್ವ ಮತ್ತು ಶಾಶ್ವತ ನಿವಾಸ ಪತ್ರ ಎಂದರೇನು ಅಂತ ಬಿಜೆಪಿ ಅವರು ಮೊದಲು ತಿಳಿದುಕೊಳ್ಳಲಿ ಅಂತ ಕಿಡಿಕಾರಿದ್ದಾರೆ.

ಪೌರತ್ವ ಪ್ರಮಾಣ ಪತ್ರ ಕೊಡೋದು ಕೇಂದ್ರ ಸರ್ಕಾರ ನಾವಲ್ಲ. ನಮ್ಮ 10 ಮಾನದಂಡದ ಒಳಗೆ ಇದ್ದರೆ ‌ಮಾತ್ರ ನಾವು ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಡ್ತೀವಿ. ಇಲ್ಲದೇ ಹೋದ್ರೆ ನಾವು ಸರ್ಟಿಫಿಕೇಟ್ ಕೊಡಲ್ಲ. ಮಾನದಂಡದ ಅನ್ವಯ ಮಾತ್ರವೇ ಸರ್ಟಿಫಿಕೇಟ್ ಕೊಡ್ತೀವಿ ಅಂತ ಸಮರ್ಥನೆ ಮಾಡಿಕೊಂಡಿದ್ದಾರೆ.


Spread the love

About Laxminews 24x7

Check Also

ಹಾರಂಗಿ ಜಲಾಶಯ ಭರ್ತಿಗೆ 8 ಅಡಿ ಬಾಕಿ – ರೈತರ ಮೊಗದಲ್ಲಿ ಮೂಡಿದ ಸಂತಸ

Spread the loveಮಡಿಕೇರಿ: ಕೊಡಗು  ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಇದೀಗ ಮತ್ತೆ ಬಿರುಸುಗೊಂಡಿದೆ. ಮಳೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ