ಕೊರೋನಾ ಪರಿಸ್ಥಿತಿ ಹೇಗಾಗಿದೆ ಅಂದ್ರೆ ರೋಗಿಗಳು ಗುಣಮುಖರಾದ್ರು ಆಸ್ಪತ್ರೆ ಇಂದ ಹೋಗೋ ಮನಸ್ಸು ಮಾಡ್ತ ಇಲ್ಲಾ. ಇಂತಹ ವಿಚಿತ್ರ ಘಟನೆ ಬಾಗಲಕೋಟೆಯ ಆಸ್ಪತ್ರೆಗಳಲ್ಲಿ ನಡೆದಿದೆ. ಇಲ್ಲಿ ಒಂದುಕಡೆ ಕೊರೋನಾ ರೋಗಿಗಳ ಸಂಖ್ಯೆ ಹೆಚ್ಚಾಗ್ತ ಇದ್ರೆ , ಚಿಕಿತ್ಸೆ ಪಡೆದು ಗುಣ ಮುಖರಾದ್ರು ಮನೆಗೆ ತೆರಳದ ರೋಗಿಗಳು ಇನ್ನೊಂದು ಕಡೆ.
ಯಾಕೆ ಈ ರೋಗಿಗಳು ಆಸ್ಪತ್ರೆ ಬಿಟ್ಟು ಮನೆಗೆ ಹೋಗಲು ಕೇಳಲ್ಲ ಅಂತ ವಿಚಾರಿಸಿದ ಜಿಲ್ಲಾಡಳಿತಕ್ಕೆ, ರೋಗಿಗಳ ಉತ್ತರ ಕೇಳಿ ದಂಗಾಗಿದೆ. ಏನಂದ್ರೆ, ಮತ್ತೆ ನಮಗೆ ಅನಾರೋಗ್ಯಕಾಡಿದ್ರೆ ಆಕ್ಸಿಜನ್ ಬೆಡ್ ಸಿಗುತ್ತೋ ಇಲ್ಲವೋ ಅನ್ನೋ ಅನುಮಾನ.. ಹಾಗಾಗಿ ನಾವು ಸಧ್ಯಕ್ಕೆ ಆಸ್ಪತ್ರೆ ಬಿಟ್ಟು ಹೋಗಲ್ಲ ಅಂತಿದ್ದಾರೆ ರೋಗಿಗಳು.