ಧಾರವಾಡ: ಕೋವಿಡ್ ಹಾವಳಿ ಮಧ್ಯೆಯೂ ಕಳೆದ ವರ್ಷ ಎಸ್ಎಸ್ಎಲ್ ಸಿ, ಪಿಯು ಪರೀಕ್ಷೆ ನಡೆಸಿದಂತೆ ಈ ವರ್ಷ ನಿಗದಿಯಾಗಿರುವ ಪರೀಕ್ಷೆಗಳ ಯಶಸ್ವಿಯಾಗಿ ನಡೆಸಲು ಧಾರವಾಡದ ಡಯಟ್ ಸಭಾಂಗಣದಲ್ಲಿ ಇಂದು ಸಭೆ ನಡೆಸಲಾಗುತ್ತಿದೆ.
ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು, ಬೆಳಗಾವಿ ವಿಭಾಗದ ಶೈಕ್ಷಣಿಕ ಜಿಲ್ಲೆಗಳ ಎಸ್ಎಸ್ಎಲ್ ಸಿ, ಪಿಯುಸಿ ಪರೀಕ್ಷಾ ಪೂರ್ವಸಿದ್ಧತಾ ಪರಿಶೀಲನೆ ಸಭೆ ನಡೆಸಿದರು.
ಸಂಜೆವರೆಗೂ ಎಲ್ಲಾ ಒಂಭತ್ತು ಶೈಕ್ಷಣಿಕ ಜಿಲ್ಲೆಗಳಲ್ಲಿನ ಪರೀಕ್ಷಾ ಸಿದ್ದತೆ ಕುರಿತು ಸಚಿವರು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳಗಾವಿ ಡಯಟ್ ಪ್ರಕಟಿಸಿರುವ ಶಿಕ್ಷಣ ಸಂಪದ ಕೃತಿ ಹಾಗೂ ಸಿಸ್ಲೆಪ್ ಲಾಂಛನ ಬಿಡುಗಡೆ ಮಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ನಿರ್ದೇಶಕಿ ಮಮತಾ ನಾಯಕ್, ಸಿಸ್ಲೆಪ್ ನಿರ್ದೇಶಕ ಬಿ.ಎಸ್.ರಘುವೀರ್,ವಿದ್ಯಾ ನಾಡಿಗೇರ ಮತ್ತಿತರರು ಇದ್ದರು.