ಬೆಂಗಳೂರು: ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಸಚಿವರು ನ್ಯಾಯಾಲಯಕ್ಕೆ ಹೋಗಲು ಸಲಹೆ ಕೊಟ್ಟವರು ಅವಿವೇಕಿಗಳು ಎಂದು ರಮೇಶ್ ಕುಮಾರ್ ಪರೋಕ್ಷವಾಗಿ ಸಚಿವ ಸುಧಾಕರ್ ಗೆ ಟಾಂಗ್ ನೀಡಿದರು.
ಸಿಡಿ ಚರ್ಚೆ ವೇಳೆ ಮಾತನಾಡಿದ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹೋಗಲು ಸಲಹೆ ಕೊಟ್ಟವರು ಅವಿವೇಕಿಗಳು ಅಥವಾ ಹಿತೈಷಿಗಳು ಎಂದು ನಟಿಸಿ ನಿಮ್ಮನ್ನು ಮುಗಿಸಲು ಮಾಡಿದ ಸಂಚು ಎಂದು ಆರೋಪಿಸಿದರು. ಕೋರ್ಟ್ ಗೆ ಹೋಗಿದ್ದನ್ನು ಸಮಾಜ ಏನು ತಿಳಿದುಕೊಳ್ಳುತ್ತದೆ, ಯಾಕೆ ನ್ಯಾಯಾಲಯಕ್ಕೆ ಹೋದಿರಿ ಎಂದು ಪ್ರಶ್ನೆ ಮಾಡಿದರು.
ಇದೇ ವೇಳೆ ಮಧ್ಯ ಪ್ರವೇಶ ಮಾಡಿದ ರಮೇಶ್ ಕುಮಾರ್, ಗುರು- ಶಿಷ್ಯರ ನಡುವಿನ ಬದ್ಮಾಶ್ ಕಥೆ ಹೇಳಿದರು.
ತುಂಬಿದ ನದಿಯನ್ನು ದಾಟಲು ಯವತಿಯೊಬ್ಬಳು ಗುರುವೊಬ್ಬರಲ್ಲಿ ವಿನಂತಿ ಮಾಡಿದರು. ಗುರುಗಳು ತಮ್ಮ ಶಿಷ್ಯರಿಗೆ ಯುವತಿಯನ್ನು ನದಿ ದಾಟಿಸುವಂತೆ ಸೂಚನೆ ನೀಡಿದರು. ಅದರಂತೆ ಶಿಷ್ಯರು ಯುವತಿಯನ್ನು ನದಿ ದಾಟಿಸಿದರು. ಇದಾದ ಬಳಿಕ ಶಿಷ್ಯರೊಂದಿಗೆ ಗುರುಗಳು ಯುವತಿಯನ್ನು ನದಿ ದಾಟಿಸುವಾಗ ಆದ ಅನುಭದ ಬಗ್ಗೆ ಕೇಳಿದರು. ಹೀಗೆ ಕೆಲವು ಬದ್ಮಾಶ್ ಗಳು ಇರ್ತಾರೆ ಎಂದು ರಮೇಶ್ ಕುಮಾರ್ ಕಥೆಯೊಂದನ್ನು ಉಲ್ಲೇಖಿಸಿ ಹೇಳಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಬಸವರಾಜ ಬೊಮ್ಮಾಯಿ, ಅದೇ ಬದ್ಮಾಶ್ ಗಳು ಯಾರು ಅನ್ನೋದು ನನ್ನ ಪ್ರಶ್ನೆ ಎಂದರು.
ಕೋರ್ಟ್ ಗೆ ಹೋಗಿ ಎಂದು ಸಲಹೆ ಕೊಟ್ಟವರು ಅವಿವೇಕಿಗಳು ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಸಚಿವರು ನ್ಯಾಯಾಲಯಕ್ಕೆ ಹೋಗಲು ಸಲಹೆ ಕೊಟ್ಟವರು ಅವಿವೇಕಿಗಳು ಅಥವಾ ಹಿತೈಷಿಗಳು ಎಂದು ನಟಿಸಿ ನಿಮ್ಮನ್ನು ಮುಗಿಸಲು ಮಾಡಿದ ಸಂಚು ಎಂದು ಆರೋಪ ಮಾಡಿದರು.