ಬೆಳಗಾವಿ: ಮೊಮ್ಮಕಳ್ಳನ್ನು ಆಡಿಸುವ ವಯಸ್ಸಿನಲ್ಲಿ ಮತ್ತೊಂದು ಮದುವೆ ಆಗಿ ಆಸ್ತಿಯಲ್ಲಿ ಎರಡನೆಯ ಹೆಂಡತಿಗೆ ಪಾಲು ಕೊಡಲು ಹೊರಟಿದ್ದ ವ್ಯಕ್ತಿಯನ್ನು ತಾನೇ ಹುಟ್ಟಿಸಿದ ಮಕ್ಕಳು ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ 62 ವರ್ಷದ ಯಲಪ್ಪ ಹರಕಿ ಎಂಬಾತ ಕಳೆದ 35 ವರ್ಷದ ಹಿಂದೆಯೇ ಮದುವೆ ಆಗಿ ಮೂರು ಮಕ್ಕಳ ತಂದೆ ಕೂಡಾ ಆಗಿದ್ದ,ಅದ್ಯಾಕೋ ಮೊದಲೇನೆಯ ಹೆಂಡತಿ ಹಾಗೂ ಮಕ್ಕಳನ್ನು ಬಿಟ್ಟು ಇನ್ನೊಂದು ಮದುವೆ ಕೂಡಾ ಆಗಿದ್ದ,ಅದೇ ರೀತಿ ತನ್ನ ಹೆಸರಲ್ಲಿದ್ದ 5 ಎಕರೆ ಹೊಲದಲ್ಲಿ ಎರಡನೆಯ ಹೆಂಡತಿಗೆ ಕೊಡಲು ಮುಂದಾಗಿದ್ದಇದೆ ಕಾರಣಕ್ಕೆ ಮೊದಲನೆಯ ಹೆಂಡತಿಯ ಮಕ್ಕಳಾದ ಚಂದ್ರಪ್ಪ, ಸಿದ್ದಪ್ಪ ಹಾಗೂ ಹಾಲಪ್ಪ ರೊಚ್ಚಿಗೆದ್ದು ಮರಕಾಸ್ತ್ರಗಳಿಂದ ತಂದೆಯನ್ನು ಕೊಚ್ಚಿ ಕೊಲೆ ಮಾಡಿದ್ದಾರೆ,ಸಧ್ಯ ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ