ಮುಂಬೈ :ಉದ್ಯಮಿ ಆನಂದ್ ಮಹೀಂದ್ರಾ ಆಗಾಗ್ಗೆ ವಿವಿಧ ವೈರಲ್ ಫೋಟೋಗಳನ್ನು ಟ್ವಿಟರ್ ನಲ್ಲಿ ಪೋಸ್ಟ್ ಹಾಕುತ್ತಿರುತ್ತಾರೆ.
ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಫೋಟೋ ಯುವಕನೊಬ್ಬ ರೈಲಿನಲ್ಲಿ ಮಲಗಿದ್ದನ್ನು ತೋರಿಸುತ್ತದೆ. ಕರೋನವೈರಸ್ ಸೋಂಕನ್ನು ತಡೆಗಟ್ಟಲು ಅವನು ಹಾಕಿರುವ ಮಾಸ್ಕ್ ಅವನ ಮೂಗು ಮತ್ತು ಬಾಯಿ ಮುಚ್ಚುವ ಬದಲಾಗಿ ಅವನ ಕಣ್ಣುಗಳನ್ನು ಮುಚ್ಚಿದೆ. ಅವನ ಅಕ್ಕಪಕ್ಕದಲ್ಲಿ ಜನರೂ ಇದ್ದಾರೆ.ಆದರೂ ಆತ ಮಾಸ್ಕ್ ನ್ನು ಸರಿಯಾಗಿ ಹಾಕಿರಲಿಲ್ಲ.
ಅದಕ್ಕೆ ಅವರು ‘ಮುಂಬೈನಲ್ಲಿ ಇತ್ತೀಚಿನ ಕೋವಿಡ್ ಪ್ರಕರಣಗಳ ಹೆಚ್ಚಳದ ಹಿಂದಿನ ಕಾರಣಗಳನ್ನು ನೀವು ಹುಡುಕಲು ಪ್ರಾರಂಭಿಸಿದಾಗ ಈ ಕಾರಣ ಕೂಡ ಆಗಿದೆ’ ಎಂದು ಪೋಸ್ಟ್ ಮಾಡಿದ್ದಾರೆ.
ಜನರಿಗೆ ರೋಗದ ಬಗ್ಗೆ ಹೆದರಿಕೆ, ಸರ್ಕಾರದ ನಿಯಮ ಪಾಲಿಸುವ ಕಳಕಳಿ ಇಲ್ಲದಿದ್ದರೆ ಕೊರೋನಾ ಎಲ್ಲಿ ಹೋಗುತ್ತೆ ಎಂದಿದ್ದಾರೆ.