Breaking News
Home / ಜಿಲ್ಲೆ / ಬೆಂಗಳೂರು / ನಟ ರಾಘವೇಂದ್ರ ರಾಜ್ ಕುಮಾರ್ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್

ನಟ ರಾಘವೇಂದ್ರ ರಾಜ್ ಕುಮಾರ್ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್

Spread the love

ಬೆಂಗಳೂರು: ಅನಾರೋಗ್ಯದಿಂದ ಫೆಬ್ರವರಿ 16ರಂದು ಸಂಜೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದ ನಟ-ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್‌ ಅವ್ರು ಸಧ್ಯ ಡಿಸ್ಚಾರ್ಜ್‌ ಆಗಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್‌ ನಂತ್ರ ಮಾತನಾಡದ ರಾಘಣ್ಣ ‘ಬೆಳಕು ಸಿನಿಮಾದ ಶೂಟಿಂಗ್​ನಲ್ಲಿದ್ದೆ. ಆ ಸಮಯದಲ್ಲಿ ಹೃದಯ ಬಡಿತದಲ್ಲಿ ಏರು ಪೇರು ಕಾಣಿಸಿಕೊಳ್ತು. ಆಗಲೇ ಆಸ್ಪತ್ರಗೆ ಬಂದು ಅಡ್ಮಿಟ್​ ಆದೆ. ಇದೇ ಆಸ್ಪತ್ರೆಯಲ್ಲಿ ನಾನು ಏಳು ವರ್ಷದ ಹಿಂದೆ ಸ್ಟ್ರೋಕ್​ ಆದಾಗಲೂ ಅಡ್ಮಿಟ್​ ಆಗಿದ್ದೆ. ಇಲ್ಲಿ ಬಂದು ಆಯಂಜಿಯೋಗ್ರಾಮ್​ ಮಾಡಿ ಸದ್ಯ ಪೇಸ್​ ಮೇಕರ್​ ಹಾಕಿದ್ದಾರೆ. ಇನ್ನೊಂದು ವಾರದಲ್ಲಿ ನಾನು ಕೆಲಸಕ್ಕೆ ವಾಪಾಸ್ಸಾಗ್ತೇನೆ’ ಎಂದರು.

‘ಅಂದ್ಹಾಗೆ ನೀವೆಲ್ಲರೂ ನಾನು ಬಿಡುವಿಲ್ಲದೇ ಕೆಲಸ ಮಾಡಿದ್ರಿಂದ ನನಗೆ ಹೀಗಾಗಿರಬಹುದು ಅಂತೀರಾ. ಆದ್ರೆ, ಆ ದಿನ ನಾನು ಕೆಲಸದಲ್ಲಿರದೇ ಬೇರೆ ಎಲ್ಲೋ ಇದ್ದಿದ್ರೆ, ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಬರೋದಕ್ಕೆ ಆಗ್ತಿರ್ಲಿಲ್ಲ. ಆವತ್ತು ಶೂಟಿಂಗ್​ ನನ್ನನ್ನ ಕಾಪಾಡಿದ್ದು. ನಾನು ನನ್ನ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ತಿದ್ದೀನಿ. ನಾನು ದಾವಣಗೆರೆಗೆ ಪೊಗರು ಆಡಿಯೋ ಲಾಂಚ್​ಗೆ ಹೋಗಿರೋದು, ಬಿಡುವಿಲ್ಲದೇ ಕೆಲಸ ಮಾಡಿರೋದು ಯಾವುದೂ ಇದಕ್ಕೆ ಕಾರಣ ಅಲ್ಲ. ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಪುಣ್ಯ, ನಾನು ಚೆನ್ನಾಗಿದ್ದೀನಿ. ಇನ್ನೊಂದು ವಾರದಲ್ಲಿ ನಾನು ಶೂಟಿಂಗ್​ ಶುರು ಮಾಡ್ತೀನಿ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಇರುವವರೆಗೂ ನನ್ನ ಆ ಶಕ್ತಿ ಕಾಪಾಡುತ್ತೆ’ ಎಂದರು.

 


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ