ಬೆಂಗಳೂರು: ಅನಾರೋಗ್ಯದಿಂದ ಫೆಬ್ರವರಿ 16ರಂದು ಸಂಜೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದ ನಟ-ನಿರ್ಮಾಪಕ ರಾಘವೇಂದ್ರ ರಾಜ್ಕುಮಾರ್ ಅವ್ರು ಸಧ್ಯ ಡಿಸ್ಚಾರ್ಜ್ ಆಗಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ನಂತ್ರ ಮಾತನಾಡದ ರಾಘಣ್ಣ ‘ಬೆಳಕು ಸಿನಿಮಾದ ಶೂಟಿಂಗ್ನಲ್ಲಿದ್ದೆ. ಆ ಸಮಯದಲ್ಲಿ ಹೃದಯ ಬಡಿತದಲ್ಲಿ ಏರು ಪೇರು ಕಾಣಿಸಿಕೊಳ್ತು. ಆಗಲೇ ಆಸ್ಪತ್ರಗೆ ಬಂದು ಅಡ್ಮಿಟ್ ಆದೆ. ಇದೇ ಆಸ್ಪತ್ರೆಯಲ್ಲಿ ನಾನು ಏಳು ವರ್ಷದ ಹಿಂದೆ ಸ್ಟ್ರೋಕ್ ಆದಾಗಲೂ ಅಡ್ಮಿಟ್ ಆಗಿದ್ದೆ. ಇಲ್ಲಿ ಬಂದು ಆಯಂಜಿಯೋಗ್ರಾಮ್ ಮಾಡಿ ಸದ್ಯ ಪೇಸ್ ಮೇಕರ್ ಹಾಕಿದ್ದಾರೆ. ಇನ್ನೊಂದು ವಾರದಲ್ಲಿ ನಾನು ಕೆಲಸಕ್ಕೆ ವಾಪಾಸ್ಸಾಗ್ತೇನೆ’ ಎಂದರು.
‘ಅಂದ್ಹಾಗೆ ನೀವೆಲ್ಲರೂ ನಾನು ಬಿಡುವಿಲ್ಲದೇ ಕೆಲಸ ಮಾಡಿದ್ರಿಂದ ನನಗೆ ಹೀಗಾಗಿರಬಹುದು ಅಂತೀರಾ. ಆದ್ರೆ, ಆ ದಿನ ನಾನು ಕೆಲಸದಲ್ಲಿರದೇ ಬೇರೆ ಎಲ್ಲೋ ಇದ್ದಿದ್ರೆ, ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಬರೋದಕ್ಕೆ ಆಗ್ತಿರ್ಲಿಲ್ಲ. ಆವತ್ತು ಶೂಟಿಂಗ್ ನನ್ನನ್ನ ಕಾಪಾಡಿದ್ದು. ನಾನು ನನ್ನ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ತಿದ್ದೀನಿ. ನಾನು ದಾವಣಗೆರೆಗೆ ಪೊಗರು ಆಡಿಯೋ ಲಾಂಚ್ಗೆ ಹೋಗಿರೋದು, ಬಿಡುವಿಲ್ಲದೇ ಕೆಲಸ ಮಾಡಿರೋದು ಯಾವುದೂ ಇದಕ್ಕೆ ಕಾರಣ ಅಲ್ಲ. ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಪುಣ್ಯ, ನಾನು ಚೆನ್ನಾಗಿದ್ದೀನಿ. ಇನ್ನೊಂದು ವಾರದಲ್ಲಿ ನಾನು ಶೂಟಿಂಗ್ ಶುರು ಮಾಡ್ತೀನಿ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಇರುವವರೆಗೂ ನನ್ನ ಆ ಶಕ್ತಿ ಕಾಪಾಡುತ್ತೆ’ ಎಂದರು.