ಗೋಕಾಕ – ಬೆಳಗಾವಿ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಹೊಸ ಹೊಸ ಹೆಸರು ಗಳು ಕೇಳಿ ಬರ್ತಿದೆ, ಆದ್ರೆ ಅದು ಸೋಶಿಯಲ್ ಮೀಡಿಯಾ ಹಾಗೂ ಮೈನ್ಸ್ಟ್ರೀಮ್ ಮೀಡಿಯಾದಲ್ಲಿ ವಿಷಯಗಳ ಚರ್ಚೆ ಜೋರಾಗೆ ಇದೆ.
ಆದ್ರೆ ಇವತ್ತು ಸತೀಶ್ ಜಾರಕಿಹೊಳಿ ಅವರು ಅಶೋಕ್ ಪೂಜಾರಿ ಮನೆಗೆ ಭೇಟಿ ಕೊಟ್ಟು ಕಾಂಗ್ರೆಸ್ ಪಕ್ಷ ಸೇರಿ ಕೊಳ್ಳಲು ಆಹ್ವಾನ ನೀಡಿದರು ಇನ್ನು ಲಿಂಗಾಯತ ಸಮುದಾಯದ ಜನರಿಗೆ ಭೇಟಿ ನೀಡಿತಮ್ಮ ಪಕ್ಷಕ್ಕೆ ಆಹ್ವಾನ ನೀಡುತ್ತೇನೆ ಪಕ್ಷ ಕಟ್ಟೋದು ನಮ್ಮ ಜವಾಬ್ದಾರಿ ಆಗಿದೆ ಅಂತಾರೆ ಸತೀಶ್ ಜಾರಕಿಹೊಳಿ.
ಇನ್ನು ಸತೀಶ್ ಜಾರಕಿಹೊಳಿ ಅವರ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ ನಾನು ಇವಾಗ ಜೆಡಿಎಸ್ ಪಕ್ಷದಲ್ಲಿ ಇದ್ದೇನೆ ದೇವೇಗೌಡ್ರು ನನ್ನ ರಾಜಕೀಯ ಗುರುಗಳು, ಹಾಗೂ ಕಾಂಗ್ರೆಸ್ ಪಕ್ಷಸೇರೋದು ನನ್ನ ಕ್ಷೇತ್ರದ ಮತ ಬಾಧವರು ಹಾಗೂ ನನ್ನ ಹಿತೈಷಿಗಳ ನಿರ್ಧಾರದ ಮೇಲಿದೆ ಎಂದ್ರು…
ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ವಿಧಾನ ಸಭಾ ಚುನಾವಣೆ ಯಲ್ಲಿ ಸ್ಪರ್ಧಿಸಿ ಸೋಲು ಕಂಡ ಅಶೋಕ್ ಪೂಜಾರಿ ಅವರಿಗೆ ಕಾಂಗ್ರೆಸ್ ಪಕ್ಷ ಕೈ ಹಿಡಿದು ದೆಹಲಿಯ ಲೋಕಸಭೆ ವರೆಗೆ ಮುಟ್ಟಿಸುತ್ತ ಅನ್ನೋದನ್ನ ಕಾದು ನೋಡಬೇಕಿದೆ…