ಬೆಂಗಳೂರು: ‘ಅನ್ನಭಾಗ್ಯ’ಕ್ಕೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ಅನ್ನು ಜಾರಿಗೆ ತರಲು ಮುಂದಾಗಿದ್ದು, ಈ ನಡುವೆ ರಾಜ್ಯ ಸರ್ಕಾರ ಹಾಗೂ ನಾಗರೀಕ ಆಹಾರ ಪೂರೈಕೆ ಸಚಿವ ಉಮೇಶ್ ಕತ್ತಿ ವಿರುದ್ದ ಖುದ್ದು ಬಿಜೆಪಿ ನಾಯಕರುಗಳೇ ಬೇಸರ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಈ ಬಗ್ಗೆ ಶಾಸಕ ಸೋಮಶೇಖರ ರೆಡ್ಡಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಫ್ರಿಡ್ಜ್ ಹಾಗೂ ವಾಹನಗಳು ಇದ್ದೇ ಇರುತ್ತವೆ, ಸರ್ಕಾರ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಟಿವಿ ಸಹಕಾರಿಯಾಗಲಿದೆ ಅವೇ ಇರಬಾರದು ಅಂದ್ರೆ ಹೇಗೆ ಹೇಳಿ ಅಂತ ಪ್ರಶ್ನೆ ಮಾಡಿದರು. ಇನ್ನೂ ಇದೇ ವೇಳೆ ಅವರು ಇಂತಹ ನಿಯಮಗಳನ್ನು ಮಾಡಿದರೆ ತಪ್ಪಾಗುತ್ತದೆ, ಹೀಗಾಗಿ ನಿಜವಾದ ಬಡವರನ್ನು ಆರ್ಥಿಕ ಮಟ್ಟದಿಂದ ಗುರುತಿಸಿ, ತಪ್ಪಾಗಿ ಕಾರ್ಡ್ ಪಡೆದುಕೊಂಡಿರುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಹೇಳಿದರು.