ನವದೆಹಲಿ,ಜ.26- ಕೊರೊನಾ ಹಾಗೂ ಇತರೆ ಆತಂಕಗಳ ನಡುವೆಯೂ ನಡೆದ 72ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಕಿಂಚಿತ್ತೂ ಕೊರತೆಗಳು ಕಂಡುಬರಲಿಲ್ಲ. ಎಂದಿನಂತೆ ಸೇನೆ ತನ್ನ ಶಕ್ತಿ ಸಾಮಥ್ರ್ಯಗಳನ್ನು ಸಮರ್ಥಿಸಿದರೆ, ವಿವಿಧ ರಾಜ್ಯಗಳ ವೈವಿದ್ಯಮಯ ಸಂಸ್ಕøತಿ ಕಲೆಗಳು ಜಗತ್ತಿನ ಮುಂದೆ ಅನಾವರಣಗೊಂಡವು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್ ಬಳಿ ಇರುವ ಯೋಧರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸುವ ಮೂಲಕ ಗಣರಾಜ್ಯೋತ್ಸವಕ್ಕೆ ಚಾಲನೆ ನೀಡಿದರು. ಸಂಪ್ರದಾಯದಂತೆ 21 ಗನ್ ಸೆಲ್ಯೂಟ್ಗಳ ನಡುವೆ ರಾಷ್ಟ್ರ ಧ್ವಜಾರೋಹಣ ನೆರವೇರಿತು.
ಅನಂತರ ಆರಂಭಗೊಂಡ ಪರೇಡ್ನಲ್ಲಿ 17 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 32 ಟ್ಯಾಬ್ಲೊಗಳು ಪರೇಡ್ನಲ್ಲಿ ಭಾಗವಹಿಸಿದ್ದವು. ಕೇಂದ್ರ ರಕ್ಷಣಾ ಸಚಿವಾಲಯದ 6, ಕೇಂದ್ರ ಸಚಿವಾಲಯಗಳು ಮತ್ತು ಅರೆಸೇನಾಪಡೆಯ 9, ರಾಷ್ಟ್ರ, ಸಂಸ್ಕøತಿ, ಪರಂಪರೆ, ಆರ್ಥಿಕತೆಯನ್ನು ಬಿಂಬಿಸುವ ಟ್ಯಾಬ್ಲೊಗಳು ಹೆಮ್ಮೆಯಿಂದ ಪರೇಡ್ನಲ್ಲಿ ಸಾಗಿದವು. ಬಾಂಗ್ಲಾದೇಶದ 122ಮಂದಿಯ ಸೇನಾ ದಳ ಪರೇಡ್ನಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
1971ರಲ್ಲಿ ಪಾಕ್ ಮೇಲಿನ ಯುದ್ಧದಿಂದ ಬಾಂಗ್ಲಾದೇಶವನ್ನು ಪ್ರತ್ಯೇಕಗೊಳಿಸಿದ ಸುವರ್ಣಮಹೋತ್ಸವವನ್ನು ಉಭಯ ದೇಶಗಳು ಆಚರಿಸುತ್ತಿವೆ. ಭಾರತೀಯ ನೌಕಾದಳ ವಿಕ್ರಾಂತ್ ಮತ್ತು ನಾವಲ್ನ ಟ್ಯಾಬ್ಲೊಗಳನ್ನು ಪ್ರದರ್ಶನ ಮಾಡಿತು. ಭಾರತೀಯ ವಾಯುದಳ ತೇಜಸ್ ಮತ್ತು ಟ್ಯಾಂಕರ್ಗಳನ್ನು ಪ್ರತಿರೋಧಿಸು ಮಿಸೈಲ್ಗಳ ಪ್ರತಿಕೃತಿಗಳನ್ನು ಪ್ರದರ್ಶಿಸಲಾಯಿತು.