ಬೆಂಗಳೂರು: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯು 12 ವರ್ಷಗಳಲ್ಲಿ 15.297 ಕೋಟಿ ರೂ.ಗಳಷ್ಟು ದೊಡ್ಡ ವೆಚ್ಚದ ಹೊರತಾಗಿಯೂ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಉದ್ದೇಶವು ಈಡೇರಿಲ್ಲ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ.![]()
ವಿಧಾನಸಭೆಯಲ್ಲಿ ಮಂಡಿಸಲಾದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ಕುರಿತ ಸಿಎಜಿ ವರದಿಯು ಹಲವು ನ್ಯೂನತೆ, ದೋಷಗಳನ್ನು ಉಲ್ಲೇಖಿಸಿದೆ. ಸಮತೋಲನ ಜಲಾಶಯದ ಸ್ಥಳ ಮತ್ತು ಸಾಮರ್ಥ್ಯವನ್ನು ಅಂತಿಮಗೊಳಿಸುವಲ್ಲಿ ಅತಿಯಾದ ವಿಳಂಬ, ಹಣಕಾಸಿನ ಮೂಲದ ಬಗ್ಗೆ ಅನಿಶ್ಚಿತತೆ, ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ದೀರ್ಘ ವಿಳಂಬ ಮತ್ತು ಅನುಷ್ಠಾನದ ಸಮಯದಲ್ಲಿ ವಿವಿಧ ಅಡಚಣೆಗಳನ್ನು ಸಕಾಲಿಕವಾಗಿ ಪರಿಹರಿಸದಿರುವುದು ಮುಂತಾದ ನ್ಯೂನತೆಗಳಿಂದ ಯೋಜನೆಯು ಬಳಲುತ್ತಿತ್ತು. ಇದರ ಪರಿಣಾಮವಾಗಿ, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯು 12 ವರ್ಷಗಳಲ್ಲಿ 15.297 ಕೋಟಿ ರೂ.ಗಳಷ್ಟು ದೊಡ್ಡ ವೆಚ್ಚದ ಹೊರತಾಗಿಯೂ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಉದ್ದೇಶವು ಈಡೇರಿಲ್ಲ ಎಂದು ತಿಳಿಸಲಾಗಿದೆ.
ಬೇಸಿಗೆಯ ತಿಂಗಳುಗಳಲ್ಲಿ ನಿರಂತರ ನೀರು ಸರಬರಾಜು ಮಾಡಲು ಯೋಜನೆಯ ಅತ್ಯಗತ್ಯ ಅಂಶವಾಗಿದ್ದ ಸಮತೋಲನ ಜಲಾಶಯದ ಸ್ಥಳವನ್ನು ಎರಡು ಬಾರಿ ಬದಲಾಯಿಸಿರುವುದು ಮತ್ತು ಅದರ ಸಾಮರ್ಥ್ಯವನ್ನು ಆರಂಭದಲ್ಲಿ ಪ್ರಸ್ತಾಪಿಸಲಾದ 10 ಟಿಎಂಸಿಯಿಂದ 2 ಟಿಎಂಸಿಗೆ ಗಣನೀಯವಾಗಿ ಕಡಿಮೆ ಮಾಡಿರುವುದನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆ. ಇದಕ್ಕೆ ಮಳೆಗಾಲದ ತಿಂಗಳುಗಳಲ್ಲಿ ಹೆಚ್ಚಿನ ನೀರನ್ನು ಪಂಪ್ ಮಾಡುವ ಅಗತ್ಯವಿದೆ ಮತ್ತು ತತ್ಪರಿಣಾಮವಾಗಿ ವಿನ್ಯಾಸ ಬದಲಾವಣೆಗಳು 621.45 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚವಾಗಿದೆ ಎಂದು ಹೇಳಿದೆ.
2018-19ರಿಂದ 2022-23ರ ಅವಧಿಯಲ್ಲಿ ಯೋಜನೆಗೆ ಆಯವ್ಯಯ ಅವಕಾಶದಲ್ಲಿ ಕೇವಲ ಶೇ.25ರಿಂದ 54ರಷ್ಟನ್ನು ಮಾತ್ರ ಸರ್ಕಾರವು ಒದಗಿಸಿದ್ದರಿಂದ, ಈ ಯೋಜನೆಯು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತು. ಯೋಜನೆಯ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯವಾದ ಹೊಸ ಸಾಲ ಪಡೆಯಲು ವಿಜೆಎನ್ಎಎಲ್ ಮಾಡಿದ ಮನವಿಯನ್ನು (ಜೂನ್ 2023) ಸರ್ಕಾರದ ಅನುಮೋದನೆಗೆ ಕಾಯ್ದಿರಿಸಲಾಗಿದೆ. ಇದರ ಪರಿಣಾಮವಾಗಿ ಮಾರ್ಚ್ 2024ರಲ್ಲಿದ್ದಂತೆ ಯೋಜನೆಯನ್ನು ಪೂರ್ಣಗೊಳಿಸಲು ಅಗತ್ಯವಿರುವ 7,954.63 ಕೋಟಿ ರೂ.ಗಳ ಬಗ್ಗೆ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತವು ಆರ್ಥಿಕ ಅನಿಶ್ಚಿತತೆ ಎದುರಿಸುತ್ತಿದೆ.
Laxmi News 24×7