ಸಂಕೇಶ್ವರ ಪಟ್ಟಣದ ಶ್ರೀ ಹಿರಣ್ಯಕೇಶಿ ಸಕ್ಕರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿ.,ಇದರ 2025-26 ನೇ ಸಾಲಿನ ಬಾಯ್ಲರ್ ಅಗ್ನಿಪ್ರದೀಪನ ಪೂಜೆ ನೆರವೇರಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಾಯಿತು.
ನಿಪ್ಪಾಣಿಯ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಪ್ರಗತಿ ಪಥದಲ್ಲಿ ಸಾಗಿದ್ದು,ಅದೇ ರೀತಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯು 15 ದಿನಗಳೊಮ್ಮೆ ರೈತರಿಗೆ ಬಿಲ್ ಪಾವತಿ,ಸಿಬ್ಬಂದಿಗಳಿಗೆ ಸಕಾಲಕ್ಕೆ ಸಂಬಳ,ಕಬ್ಬು ಕಟಾವು
ಮಾಲೀಕರಿಗೆ ಸಕಾಲದಲ್ಲಿ ಬಿಲ್ ನೀಡಿ,ಮಾದರಿ ಸ್ಕಕರೆ ಕಾರ್ಖಾನೆಯನ್ನಾಗಿ ಮಾಡಿ,ಪ್ರಗತಿ ಮಾಡಲಾಗುವುದು.ಈ ಹಂಗಾಮಿನಲ್ಲಿ ಪ್ರತಿದಿನ 10,000 ಟನ್ ಕಬ್ಬು ನುರಿಸುವ ಕಾರ್ಯಕ್ಷಮತೆ,1 ಲಕ್ಷ 50 ಸಾವಿರ ಈಥಿನಾಲ್ ಉತ್ಪಾದನೆ ಹಾಗೂ 18 ಸಾವಿರದಿಂದ 36 ಸಾವಿರ ಮೆಗಾ ವ್ಯಾಟ್ ಕೋ ಜನರೇಷನ್ ಗುರಿ ಹೊಂದಲಾಗಿದೆ.ಈಗಾಗಲೇ ಕಾರ್ಖಾನೆ ಸದಸ್ಯರಿಗೆ 50kg ಪಾಲುದಾರಿಕೆ ಸಕ್ಕರೆ ನೀಡಲಾಗುತ್ತಿದೆ.ಸಿಬ್ಬಂದಿಗಳಿಗೆ 7ನೇ ವೇತನ
ಜಾರಿಗೊಳಿಸಲಾಗಿದೆ.ಕಾರ್ಖಾನೆ ಏಳಿಗೆಗೆ ನಮ್ಮ ಶ್ರಮ ಅವಿರತವಾಗಿರುತ್ತದೆ. ಈ ನಿಟ್ಟಿನಲ್ಲಿ ರೈತರು ಹೆಚ್ಚಿನ ಪ್ರಮಾಣದ ಕಬ್ಬು ಕಳುಹಿಸಿ ಕೈ ಜೋಡಿಸಿಬೇಕು.
Laxmi News 24×7