ಇಂದು ರಬಕವಿ-ಬನಹಟ್ಟಿ ತಾಲೂಕಿನ ರಾಮಪೂರ ಗ್ರಾಮದ ಶ್ರೀ ದಾನೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಕಾಯಕಯೋಗಿ,
ವಚನಕಾರ ಶ್ರೀ ಶಿವಶರಣ ನೂಲಿ ಚಂದಯ್ಯ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಾಯಿತು.
ವಚನ ಸಾಹಿತ್ಯದ ಮೂಲಕ ಮಾನವೀಯ ಮೌಲ್ಯಗಳು, ಸಮಾನತೆ ಮತ್ತು ಸೇವಾ ಧೋರಣೆಯನ್ನು ಬಿತ್ತರಿಸಿದ
ಕಾಯಕಯೋಗಿ ನೂಲಿ ಚಂದಯ್ಯ ಅವರು ಜನಮನಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಅವರ ಆದರ್ಶಗಳು
ಇಂದಿನ ಪೀಳಿಗೆಗೆ ಪ್ರೇರಣೆಯಾಗಿದ್ದು, “ಕಾಯಕವೇ ಕೈಲಾಸ” ಎಂಬ ಬಸವ ತತ್ತ್ವದ ಜೀವಂತ ನಿದರ್ಶನವಾಗಿವೆ.
Laxmi News 24×7