ಬೆಂಗಳೂರು: ನಿವಾರ್ ಚಂಡಮಾರುತದ ಬೆನ್ನಲ್ಲೇ ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬುರೆವಿ ಚಂಡಮಾರುತ ಎಂಟ್ರಿ ಕೊಟ್ಟಿದೆ. ಶೀತಗಾಳಿ ಜೊತೆಗೆ ಬೆಂಗಳೂರಲ್ಲಿ ಸಾಧಾರಣ ಮಳೆಯಾಗುತ್ತಿದೆ.
ಬೆಂಗಳೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇನ್ನು ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ ಸಾಧ್ಯತೆ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಬುರೆವಿ ಸೈಕ್ಲೋನ್ ಪರಿಣಾಮ ಮಳೆಯಾಗುತ್ತಿದೆ. ಇಂದು ಮತ್ತು ನಾಳೆ ಹೆಚ್ಚಿನ ಮಳೆಯಾಗೋ ನಿರೀಕ್ಷೆ ಇದೆ. ಬೆಂಗಳೂರಲ್ಲಿ ತುಂತುರು ಮಳೆ ಆರಂಭವಾಗಿದ್ದು, ಚಳಿಯ ಜೊತೆ ಮಳೆಯ ಸಿಂಚನವಾಗುತ್ತಿದೆ. ಇದರಿಂದ ಆಫೀಸ್ ಗೆ ಹೋಗುವವರಿಗೆ ವರುಣದೇವ ಅಡ್ಡಿಯಾಗುತ್ತಿದ್ದಾನೆ.
ಕೇರಳದ 9 ಜಿಲ್ಲೆಗಳಲ್ಲಿ ಬುರೆವಿ ಅಬ್ಬರ ಜೋರಾಗಿದ್ದು, ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಶ್ರೀಲಂಕದಾ ನಾರ್ಥನ್ ಕೋಸ್ಟ್ ಲ್ ನಲ್ಲಿ ಬುರೆವಿ ಸೈಕ್ಲೋನ್ ಉಗಮವಾಗಿದೆ. ಮನ್ನಾರ್ ಕೊಲ್ಲಿ ದಾಟಿ ಕೇರಳ ಮತ್ತು ತಮಿಳುನಾಡಿನಲ್ಲಿಯೂ ಅಬ್ಬರ ಆರಂಭವಾಗಿದೆ. ವಾಯುವ್ಯ ದಿಕ್ಕಿನಲ್ಲಿ ಗಂಟೆಗೆ 75 ರಿಂದ 95 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.