ಬೆಂಗಳೂರು ನ19.ಇತ್ತೀಚೆಗಷ್ಟೇ ನಡೆದಿದ್ದ ನಗರಸಭೆ ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಯನ್ನು ರಾಜ್ಯ ಹೈಕೋರ್ಟ್ ರದ್ದುಗೊಳಿಸಿದೆ. ಇತ್ತೀಚೆಗಷ್ಟೇ ಮೀಸಲಾತಿಯ ವಿರುದ್ಧ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು ಈ ಸಂದರ್ಭದಲ್ಲಿ ಏಕಸದಸ್ಯಪೀಠ ಅದನ್ನ ವಜಾಗೊಳಿಸಿ ನವೆಂಬರ್ ಎರಡರ ಒಳಗೆ ಚುನಾವಣೆಗಳನ್ನು ನಡೆಸಲು ಸೂಚನೆ ನೀಡಿತ್ತು .
ಅದರಂತೆ ಈಗಾಗಲೇ ರಾಜ್ಯದ ಹಲವಾರು ಕಡೆ ನಗರಸಭೆ ಪುರಸಭೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆದು ಪದಗ್ರಹಣ ಮಾಡಿದ್ದಾರೆ .ಆದರೆ ನ್ಯಾಯಮೂರ್ತಿ ದೇವದಾಸ್ ಅವರ ಪೀಠ ಇಂದು ಮತ್ತೆ
ವಿಚಾರಣೆ ಕೈಗೊಂಡು ಜಿಪಂ ಸದಸ್ಯ ಪೀಠದ ಮುಂದೆ ಬಂದ ವಿಚಾರಣೆಯಲ್ಲಿ ಮೀಸಲಾತಿಯಲ್ಲಿ ಲೋಪವಾಗಿದೆ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಅದನ್ನು ರದ್ದುಪಡಿಸಲಾಗಿದೆ.