ಹುಬ್ಬಳ್ಳಿ: ಮಹಿಳೆಯರು ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ರಾಜ್ಯ ಸರ್ಕಾರ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಆಯೋಗ ಪತ್ರ ಬರೆಯುವ ಮೊದಲೇ ಎಸ್ಐಟಿ ತನಿಖೆ ಘೋಷಣೆ ಸಿಎಂ ಮಾಡಿದ್ದಾರೆ.
ಯಾರೆಲ್ಲಾ ಮಹಿಳೆಯರ ಕೈಯಿಂದ ದೂರು ಬರೆಸಿಕೊಂಡಿದ್ದಾರೆ, ಯಾರೆಲ್ಲಾ ಇದ್ದರು. ಐದಾರು ವರ್ಷಗಳ ಹಿಂದೆ ನಡೆದಿರುವ ಪ್ರಕರಣ ಈಗ ಯಾಕೆ? ಇಷ್ಟು ವರ್ಷ ಯಾಕೆ ದೂರು ನೀಡಿಲ್ಲ ಎಂದು ಕಿಡಿಕಾರಿದರು.