ಬೆಂಗಳೂರು: ಈ ಮಾಜಿ ಬ್ಯಾಂಕ್ ಉದ್ಯೋಗಿಗೆ ಈಗ ಭರ್ತಿ 83 ವರ್ಷ ವಯಸ್ಸು. ದುಶ್ಚಟ, ದುರ ಭ್ಯಾಸಗಳಿಂದ ದೂರವೇ ಉಳಿದಿರು ವುದಲ್ಲದೆ, ನಿತ್ಯವೂ ಶ್ರಮವಹಿಸಿ ಕೆಲಸ ಮಾಡುವುದೇ ಇವರ ಉತ್ತಮ ಆರೋಗ್ಯದ ಗುಟ್ಟು. ದೈಹಿಕ ಚಟುವಟಿಕೆಯೇ ಇಲ್ಲದೆ ದಿನಾ ಸೋಮಾರಿಗಳಾಗಿರುವ ಯುವ ಸಮೂಹವನ್ನು ನಾಚಿಸುವಂತಾ ಸಾವಿರಾರು ವೃದ್ಧರೊಬ್ಬರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಎಲೆ ಮರೆಯ ಕಾಯಿಯಂತೆ ದುಡಿಯುವ ಈ ಸಾಧಕರನ್ನು ಪರಿಚಯಿಸುವ ಗೋಜಿಗೆ ಯಾರು ಹೋಗುವುದಿಲ್ಲ. ರಾಜಕೀಯ ಕ್ಷೇತ್ರದ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವ ಇವರು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ಟೀವ್ ಇರ್ತಾರೆ. ಅವರೇ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್. ಅವರು ತಮ್ಮ ಫೇಸ್ಬುಕ್ ಖಾತೆ ಮೂಲಕ ವೃದ್ಧರ ಪರಿಚಯ ಮಾಡಿಕೊಟ್ಟಿದ್ದಾರೆ. ಈ ವಯೋವೃದ್ಧ ಸಾಧಕರ ಬಗ್ಗೆ ಸುರೇಶ್ ಅವರು ಬರೆದುಕೊಂಡಿದ್ದಾರೆ