ಹೈದ್ರಾಬಾದ್ : ತೆಲಂಗಾಣದಲ್ಲಿ (Telanagana)ಅಭೂತಪೂರ್ವ ಗೆಲುವು ಸಾಧಿಸಿ ಕಾಂಗ್ರೆಸ್(Congress) ಭರ್ಜರಿ ಸಂಭ್ರಮಾಚರಣೆ ನಡೆಸುತ್ತಿದೆ. ಹೈದ್ರಾಬಾದ್ ಕಚೇರಿಯಲ್ಲಿ ರೇವಂತ್ ರಡ್ಡಿಯನ್ನು ಅಪ್ಪಿ ಸಿಹಿ ತಿನ್ನಿಸಿ ಡಿ ಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಪಕ್ಕಾ ಆದ ಹಿನ್ನೆಲೆ ಡಿ ಕೆ ಶಿವಕುಮಾರ್ , ರೇವಂತ ರೆಡ್ಡಿ ನೇತೃತ್ವದಲ್ಲಿ ಪಕ್ಷದ ನಾಯಕರ ಸಭೆ ಆರಂಭವಾಗಿದ್ದು ಮುಂದಿನ ನಡೆ ಬಗ್ಗೆ ಚರ್ಚಿಸಲಾಗುತ್ತಿದೆ. ಕಾಂಗ್ರೆಸ್ ಅಧಿಕಾರ ಹಿಡಿದರೆ ಸಿಎಂ ಸ್ಥಾನಕ್ಕೆ ರೇವಂತ ರೆಡ್ಡಿ ಆಯ್ಕೆಯಾಗಲಿದ್ದಾರೆ ಜೊತೆಗೆ ಬೇರೆ ಬೇರೆ ಹುದ್ದೆಗಳ ಬಗ್ಗೆ ನಾಯಕರ ಮಧ್ಯೆ ಚರ್ಚೆ ನಡೆಯುತ್ತಿದೆ.