ಸುರೇಬಾನ: ಮಗ ಮೃತಪಟ್ಟ ಸುದ್ದಿ ತಿಳಿದು ತಾಯಿ ಸಹ ಮೃತಪಟ್ಟಿದ್ದು, ಒಂದೇ ಕುಟುಂಬದ ಇಬ್ಬರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬುಧವಾರ ಸಂಜೆ ರಾಮದುರ್ಗ ತಾಲೂಕಿನ ಸುರೇಬಾನ ಸಮೀಪದ ಹಂಪಿಹೊಳಿ ಗ್ರಾಮದಲ್ಲಿ ನಡೆದಿದೆ.
ಬಾಲಪ್ಪ ವೆಂಕಪ್ಪ ತಳವಾರ(೫೦), ಬಾಲಪ್ಪನ ತಾಯಿ ರುದ್ರವ್ವ ವೆಂ ತಳವಾರ(೭೦) ಮೃತಪಟ್ಟ ದುರ್ದೈವಿಗಳು.
ಹಣ್ಣಿನ ಸುಗ್ಗಿ ಬಂತೆಂದರೆ ಸಾಕು ಮೃತ ಬಾಲಪ್ಪ ಮರವೆರಿ ನೇರಲ ಹಣ್ಣು ಹರಿಯತ್ತಿದ್ದ. ಆದರೆ ಆಯತಪ್ಪಿ ಮರದಿಂದ ಕೆಳಗೆ ಬಿದ್ದು ಬಾಲಪ್ಪ ಸಾವನ್ನಪ್ಪದ್ದಾನೆ.