ಇಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ( ರಿ )ಸಂಯೋಜಕ ಸಂಘಟನೆ ವತಿಯಿಂದ ಭೇಟಿಯಾಗಿ ಗೋಕಾಕ್, ಮೂಡಲಗಿ ಪ್ರವಾಹ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಲಾಯಿತು.
ಹಾಗೂ ಖಾನಾಪುರ ತಾಲೂಕಿನ ದೇವರಾಯಿ ಗ್ರಾಮದಲ್ಲಿ ದಲಿತ ಕುಟುಂಬ ದೌರ್ಜನ್ಯ ಕೊಳಗಾಗಿದೆ ಅವರಿಗೆ ಸರ್ಕಾರದ ಪರಿಹಾರ ಹಾಗೂ ಸೂಕ್ತ ನ್ಯಾಯ ಹಾಗೂ ಭದ್ರತೆ ಒದಗಿಸುವಂತೆ ಜಿಲ್ಲಾಧಿಕಾರಿಯವರನ್ನು ಕೋರಲಾಯಿತು.
ಈ ಸಂದರ್ಭದಲ್ಲಿ ವಿಠಲ ಡಿ ಸಗರಮ್ಮನವರ ಬಾಗಲಕೋಟ್ ಜಿಲ್ಲಾ ಸಂಚಾಲಕರು ಯಶವಂತ್ ಮಂಟೂರ್ ಬೆಳಗಾವಿ ಜಿಲ್ಲಾ ಸಂಚಾಲಕರು ರಾಜಶೇಖರ್ ಹಿಂಡಲಗಿ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಂದಾ ಭಜಂತ್ರಿ ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷರು ಬೆಳಗಾವಿ ರಾಘವೇಂದ್ರ ಛಲವಾದಿ ಖಾನಾಪುರ್ ತಾಲೂಕ ಅಧ್ಯಕ್ಷರು ಲಕ್ಕವ್ವ ಮಂಟೂರ್ ತಾಲೂಕ ಕಾರ್ಯದರ್ಶಿ ಅಜಿತ್ ಪರ್ಸನ್ನವರ್ ಮುಧೋಳ್ ತಾಲೂಕಾ ಸಂಚಾಲಕರು ಹಾಗೂ ಇನ್ನುಳಿದ ಡಿಎಸ್ಎಸ್ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು