Breaking News
Home / ರಾಜಕೀಯ / ಆಪರೇಷನ್​ ಹಸ್ತದತ್ತ ಕಾಂಗ್ರೆಸ್​ ಚಿತ್ತ: ಸಮರ್ಥರಿಲ್ಲದ ಕಡೆ ತೀವ್ರ ಹುಡುಕಾಟ

ಆಪರೇಷನ್​ ಹಸ್ತದತ್ತ ಕಾಂಗ್ರೆಸ್​ ಚಿತ್ತ: ಸಮರ್ಥರಿಲ್ಲದ ಕಡೆ ತೀವ್ರ ಹುಡುಕಾಟ

Spread the love

ಆಪರೇಷನ್​ ಹಸ್ತದತ್ತ ಕಾಂಗ್ರೆಸ್​ ಚಿತ್ತ: ಸಮರ್ಥರಿಲ್ಲದ ಕಡೆ ತೀವ್ರ ಹುಡುಕಾಟ

ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್​ ಎದುರಾಳಿಯ ಅಸಮಾಧಾನಿತರಿಗೆ ಬಲೆ ಬೀಸಿದ್ದು, ಎರಡು ಲೆಕ್ಕಾಚಾರದಲ್ಲಿ ಎದುರಾಳಿ ಟಿಕೆಟ್​ ಆಕಾಂಗಳನ್ನು ಸೆಳೆಯುವ ಕಾರ್ಯಕ್ಕೆ ಪದ ಹೈಕಮಾಂಡ್​ ಸ್ಪಷ್ಟ ಸೂಚನೆ ನೀಡಿದೆ.

ಚುನಾವಣೆ ಕಾವು ಹೆಚ್ಚಾದ ವೇಳೆ ಯಾವ ಪಕ್ಕೆ ಹೆಚ್ಚೆಚ್ಚು ಮಂದಿ ಸೇರ್ಪಡೆಯಾಗುತ್ತಾರೋ ಆ ಪದ ಪರ ಟ್ರೆಂಡ್​ ಸೃಷ್ಟಿಯಾಗುತ್ತಿದೆ ಎಂಬ ರಾಜಕೀಯ ವಾದವೊಂದಿದೆ.

ಇದಕ್ಕೆ ಪೂರಕವಾಗಿ ಹೆಚ್ಚು ಮಂದಿಯನ್ನು ಸೇರಿಸಿಕೊಳ್ಳಲು ಪಗಳು ಮುಂದಾಗುವುದು ಸಹಜ. ಈ ನಿಟ್ಟಿನಲ್ಲಿ ಕಾಂಗ್ರೆಸ್​ ವಿಶೇಷ ಗಮನ ಹರಿಸಿದೆ. ಒಂದು ವರ್ಷದ ಹಿಂದೆಯೇ ಜೆಡಿಎಸ್​ ಬಲ ಕುಗ್ಗಿಸಲು ಆ ಪದ ಶಾಸಕರು, ಅಭ್ಯರ್ಥಿಗಳನ್ನು ಸೆಳೆಯಲು ವಿಶೇಷ ಕಾರ್ಯತಂತ್ರ ರೂಪಿಸಿತ್ತು. ಅದರ ಭಾಗವಾಗಿ ಒಂದಷ್ಟು ಮಂದಿ ಪ ಸೇರಿದ್ದರೆ ಮತ್ತೊಂದಿಷ್ಟು ಮಂದಿ ಪದ ಹೊಸ್ತಿಲ ಬಳಿ ಬಂದು ನಿಂತಿದ್ದಾರೆ. ಈಗ ಮತ್ತೊಂದು ಸುತ್ತಿನಲ್ಲಿ ಆಪರೇಷನ್​ ನಡೆಸಬೇಕೆಂಬ ಬಗ್ಗೆ ಕಾಂಗ್ರೆಸ್​ನಲ್ಲಿ ಚರ್ಚೆಯಾಗಿದೆ.

ಯಾವೆಲ್ಲ ಕ್ಷೇತ್ರದಲ್ಲಿ ಪದ ಕಡೆಯಿಂದ ಪ್ರಬಲ ಅಭ್ಯರ್ಥಿ ಇಲ್ಲವೋ ಅಂತಹ ಕಡೆಗಳಲ್ಲಿ ಜೆಡಿಎಸ್​ ಅಥವಾ ಬಿಜೆಪಿಯ ಅಭ್ಯರ್ಥಿಗಳು ಪ್ರಬಲರಾಗಿದ್ದರೆ ಅವರನ್ನು ಮಾತನಾಡಿಸಿ ಎಂಬ ಸೂಚನೆ ದೆಹಲಿಯಿಂದ ರಾಜ್ಯ ಕಾಂಗ್ರೆಸ್​ಗೆ ಬಂದಿದ್ದು, ಆ ಪ್ರಕಾರ ಮಾತುಕತೆ ನಡೆದಿದೆ. ಮೊದಲ ಸುತ್ತಿನ ಆಪರೇಷನ್​ನಲ್ಲಿ ಯಲ್ಲಾ ಪುರ, ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್​ ಆಕಾಂಗಳನ್ನು ಕಾಂಗ್ರೆಸ್​ ಬರಮಾಡಿಕೊಂಡಿತು. ಈಗ ಬೆಂಗಳೂರಿನ ಕೆ.ಆರ್​.ಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಂದೀಶ್​ ರೆಡ್ಡಿಗೆ ಗಾಳ ಹಾಕಿದ್ದು ಮಾತುಕತೆ ನಡೆಸಿದೆ. ಸಚಿವ ಬೈರತಿ ಬಸವರಾಜ್​ ಕಾಂಗ್ರೆಸ್​ಗೆ ಮರಳುವಂತೆ ಆಹ್ವಾನ ನೀಡಿದ್ದರೂ ಅವರು ಈವರೆಗೆ ಯಾವುದೇ ಉತ್ತರ ನೀಡಿರಲಿಲ್ಲ. ಹೀಗಾಗಿ ನಂದೀಶ್​ ರೆಡ್ಡಿಯವರನ್ನು ಮಾತನಾಡಿಸಲಾಗಿದೆ. ನಂದೀಶ್​ ರೆಡ್ಡಿ ಕೂಡ ಬಿಜೆಪಿಯ ಪ್ರಮುಖರಿಗೆ ವಿಚಾರ ಮುಟ್ಟಿಸಿದ್ದು, ತಮಗೆ ಅವಕಾಶ ಕೊಡುವುದನ್ನು ಖಾತ್ರಿ ಮಾಡದೇ ಇದ್ದರೆ ನಾನು ಕಾಂಗ್ರೆಸ್​ ಆಹ್ವಾನದ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ಸಂದೇಶ ಕಳಿಸಿದ್ದಾರೆನ್ನಲಾಗಿದೆ. ಹೊಸಕೋಟೆ ವಿಧಾನಸಭಾ ೇತ್ರದ ಬೆಳವಣಿಗೆ ಬಗ್ಗೆ ಕಾಂಗ್ರೆಸ್​, ಬಿಜೆಪಿ ಪರಸ್ಪರ ಕಣ್ಣಿಟ್ಟಿವೆ. ಉಪ ಚುನಾವಣೆಯಲ್ಲಿ ಪೇತರನಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ ಶರತ್​ ಬಚ್ಚೇಗೌಡ ಕಾಂಗ್ರೆಸ್​ ಸಖ್ಯ ತೊರೆದು ಬಿಜೆಪಿಗೆ ಮರಳುವ ಅವಕಾಶವಿದೆ, ಹಾಗೊಂದು ವೇಳೆ ಶರತ್​ ಹೆಜ್ಜೆ ಮುಂದಿಟ್ಟರೆ ಎಂ.ಟಿ.ಬಿ.ನಾಗರಾಜ್​ ಕಾಂಗ್ರೆಸ್​ನತ್ತ ಜಿಗಿಯಲಿದ್ದಾರೆ ಎಂಬ ವಾದವಿದೆ.


Spread the love

About Laxminews 24x7

Check Also

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

Spread the love ಕಾಸರಗೋಡು: ಕೇರಳದ ಕಾಸರ ಗೋಡು ಲೋಕಸಭೆ ಕ್ಷೇತ್ರದಲ್ಲಿ ನಡೆದ ಅಣಕು ಮತದಾನ ವೇಳೆ ಬಿಜೆಪಿ ಪರವಾಗಿ ಹೆಚ್ಚು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ