ಅಥಣಿ ತಾಲೂಕಿನ ತಂಗಡಿ ಗ್ರಾಮದ ನಿವಾಸಿ ಆನಂದ ಪಾಟೀಲ (೪೮) ಮೃತ ದುರ್ದೈವಿ
ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರ ಪಟ್ಟು.
ವಿದ್ಯುತ್ ಲೈನ್ ರಿಪೇರಿ ಮಾಡುವಾಗ ವಿದ್ಯುತ್ ತಗುಲಿ ಹೆಸ್ಕಾಂ ಲೈನ್ ಮೆನ್ ಸಹಾಯಕ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿನಾಳ ಗ್ರಾಮದಲ್ಲಿ ಘಟನೆ ಅಥಣಿ ತಾಲೂಕಿನ ತಂಗಡಿ ಗ್ರಾಮದ ನಿವಾಸಿ ಆನಂದ ಪಾಟೀಲ (೪೮) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಹೆಸ್ಕಾಂ ಲೈನ್ ಮನ್ ಸಹಾಯಕನಾಗಿ ಆನಂದ ಪಾಟೀಲ್ ಕೆಲಸ ಮಾಡುತ್ತಿದ್ದ.
ಬೆಳಿಗ್ಗೆ ವಿದ್ಯುತ್ ಸಮಸ್ಯೆ ಉಂಟಾದ ಹಿನ್ನಲೆ ಲೈನ್ ಮನ್ ಬದಲು ಕಂಬ ಏರಿದ ಕೆಲಸ ಮಾಡುತ್ತಿದ್ದ. ಎಲ್ ಸಿ ಪಡೆದು ವಿದ್ಯುತ್ ಕಂಬ ಏರಿದರೂ ಅವಘಡ ಸಂಭವಿಸಿದೆ. ವಿದ್ಯುತ್ ತೊಂದರೆ ಇದ್ದಾಗ ಕೆಎಬಿ ಲೈನ್ ಮನ್ ಬಸ್ಸು ಪಾಟೀಲ ಬದಲಾಗಿ ಆನಂದ ದುರಸ್ತಿ ಕಾರ್ಯವನ್ನು ಕೈಗೊಂಡಿದ್ದು, ಕೆಇಬಿ ನಿರ್ಲಕ್ಷ್ಯತನದಿಂದ ಆನಂದ ಪಾಟೀಲ್ ಸಾವನಪ್ಪಿದ್ದಾನೆ.
ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವು ಹಿನ್ನೆಲೆ ಗ್ರಾಮಸ್ಥರ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶವ ತೆಗೆಯದಂತೆ ಪ್ರತಿಭಟನೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದು, ಆನಂದ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರಿಂದ ಒತ್ತಾಯಿಸುತ್ತಿದ್ದರೆ.