ಹುಕ್ಕೇರಿ ತಾಲೂಕಿನ ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯಕಾರಿ ಅಭಿಯಂತರು ಶ್ರೀ ಎ ಬಿ ಪಟ್ಟಣಶೆಟ್ಟಿ ರವರ ಕರ್ತವ್ಯ ಬೀಳ್ಕೊಡುವ ಸಮಾರಂಭದ ಕಾರ್ಯಕ್ರಮವನ್ನು ಇವತ್ತು ಹುಕ್ಕೇರಿಯಲ್ಲಿ ನಿರ್ವಹಿಸಲಾಯಿತು.
ಶ್ರೀ ಪಟ್ಟಣಶೆಟ್ಟಿಯವರು ಸತತ 33 ವರ್ಷಗಳನ್ನು ತಮ್ಮ ಕಾರ್ಯದಲ್ಲಿ ತೊಡಗಿಕೊಂಡಿರುವ ಒಂದು ಅದ್ಭುತ ಕಾರ್ಯಕಾರಿ ಅಧಿಕಾರಿ ಅನ್ನಬೇಕು ಇವರು ಇವರು ಬಹಳ ಕಷ್ಟ ಕರ್ತವ್ಯಗಳಿಂದ ತಮ್ಮ ಹಂತದಲ್ಲಿರುವ ಎಲ್ಲಾ ಕಾರ್ಯ ಕೆಲಸಗಳನ್ನು ಸರಿ ಸಮೇತ ಸರಿಯಾದ ವೇಳೆಗೆ ನಿಭಾಯಿಸಿ ಇವತ್ತು ತಮ್ಮ ಕೊನೆಯ ಬಿಳ್ಕೊಡುವ ಸಮಾರಂಭ ಕಾರ್ಯಕ್ರಮ ನಿನ್ನೆ ದಿನಾಂಕ 30/ 7 /2022 ರಂದು ಮುಕ್ತಾಯಗೊಂಡಿತು.
ಇವತ್ತು ಹುಕ್ಕೇರಿ ತಾಲೂಕಿನ ಪಂಚಾಯಿತಿ ಸಭಾಭವನದಲ್ಲಿ ತಮ್ಮ ನಿವೃತ್ತಿ ಕಾರ್ಯಕ್ರಮ ನಿಭಾಯಿಸಿಕೊಂಡು ಅವರು ಮತ್ತೆ ಇನ್ನು ಮುಂದುವರಿತಕ್ಕಂತ ತಮ್ಮ ಆರೋಗ್ಯ ಭವಿಷ್ಯ ಭಾಗ್ಯ ಎಲ್ಲವನ್ನು ಕಾಪಾಡಿಕೊಂಡು ಮತ್ತೆ ಮುಂದನ ಜೀವನವನ್ನು ಅತಿ ಸುಂದರ ಹಾಗೂ ಆರೋಗ್ಯವಂತರಾಗಿ ಬದುಕಬೇಕೆಂದು ಪ್ರತಿಯೊಬ್ಬರು ಅವರ ಪರವಾಗಿ ಅಭಿನಂದನೆಗಳನ್ನ
ತಿಳಿಸಿದರು.
ಅವರು ಕರ್ತವ್ಯ ನಿಭಾಯಿಸಿರತಕ್ಕಂಥ ಕೆಲವೊಂದು ಮಾಹಿತಿಯನ್ನು ಅವರ ಬಾಯಿಂದಲೇ ಕೇಳೋಣ ಬನ್ನಿ.
ಈ ಸಂದರ್ಭದಲ್ಲಿ ಎಕ್ಸಿಕ್ಯೂಟಿವ ಇಂಜಿನಿಯರ ಶ್ರಿ ಬಿದರಳ್ಳಿ ಚಿಕ್ಕೋಡಿ, A W ಶ್ರಿ ವಿಜಯ ಮಿಸ್ರಿಕೋಟಿ, ಎಸ್ ಕೆ ಪಾಟೀಲ, ಪಿ ಏನ್ ಹುದ್ದಾರ,
ಎಸ್ ಡಿ ಕಾಂಬಳೆ, ಎಸ್ ಎ
ಭೂಸಗೋಳ, ಮತ್ತು ಮ್ಯಾನೇಜರರಾದ ನಾಡಗೌಡ, ಇವರೆಲ್ಲರೂ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವನ್ನು ನಿರ್ವಹಿಸಲಾಯಿತು.