ಇದರ ತಡೆಗೋಡೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕೋಟಿ ಕೋಟಿ ಹಣ ಬಿಡುಗಡೆ ಸಹ ಮಾಡಿದೆ. ಕಾಮಗಾರಿಯೂ ಸಹ ಭರದಿಂದ ಸಾಗಿದೆ. ಆದ್ರೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಮಾಡಿರುವ ಯಡವಟ್ಟಿ ನಿಂದ ಕೆರೆಯ ಪಕ್ಕದ ಜಮೀನ ರೈತ ಕಂಗಾಲಾಗುವಂತೆ ಮಾಡಿದೆ. ಕೆರೆಯ ಪಕ್ಕದಲ್ಲಿನ ಸರ್ವೆ ನಂಬರ್ 33/p1 ನಲ್ಲಿನ 4 ಎಕರೆ 15 ಗುಂಟೆ ಜಮೀನು ಮೃತ್ಯುಂಜಯ ಯರಗಂಬಳಿಮಠ ಅವರಿಗೆ ಸೇರಿದ ಜಮೀನು. ಈ ಜಮೀನಲ್ಲಿನ ಮಣ್ಣು ಹಾಗೂ ಕಲ್ಲನ್ನು ಅಕ್ರಮವಾಗಿ ತೆಗೆದು ಕೆರೆ ಕಾಮಗಾರಿಗೆ ಬಳಕೆ ಮಾಡಲಾಗಿದೆ.
ಜಮೀನಿನಿಂದ ಅಕ್ರಮವಾಗಿ ಮಣ್ಣು ತೆಗೆದು ಬಳಕೆ
ಮೃತ್ಯುಂಜಯ ಅವರು ಮೂಲತಃ ಹುಲಿಕೆರಿ ಗ್ರಮದ ನಿವಾಸಿ, ಆದ್ರೆ ವೃತ್ತಿಯಲ್ಲಿ ಇವರು ವಕೀಲರಾದ ಕಾರಣ ಬೆಂಗಳೂರಲ್ಲಿ ಇರುತ್ತಾರೆ. ಇವರು ಗ್ರಾಮದಲ್ಲಿ ಇರೋದಿಲ್ಲ ಎಂದು ತಿಳಿದ ಹೆಗಡೆ ಎಂಬುವ ಗುತ್ತಿಗೆದಾರರು ರೈತರ ಪರವಾನಿಗೆ ಇಲ್ಲದೇ ಹಗಲು ರಾತ್ರಿ ಎನ್ನದೆ ಮಣ್ಣು ಹಾಗೂ ಕಲ್ಲನು ತೆಗೆದು ತಮ್ಮ ಕಾಮಗಾರಿಗೆ ಬಳಕೆ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿಯುತ್ತಿದಂತೆ ಜಮೀನ ಮಾಲೀಕರಾದ ಮೃತ್ಯುಂಜಯ ಅವರು ಬೆಂಗಳೂರಿನಿಂದ ಗ್ರಾಮಕ್ಕೆ ಆಗಮಿಸಿ ತಮ್ಮ ಜಮೀನಲ್ಲಿನಡೆಯುತ್ತಿರೊ ಅಕ್ರಮದ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಲ್ಲದೇ ಜಮೀನಿಗೆ ಹೋದ ಸಮಯದಲ್ಲಿ ಜಮೀನಿನಲ್ಲಿ ಇದ್ದ ಹಿಟ್ಯಾಚ್, ಟಿಪ್ಪರ್ ಅನ್ನು ತಡೆದು ಪೊಲೀಸ್ ರ ವಶ ಪಡೆಯುವಂತೆ ಮನವಿ ಮಾಡಿದ್ದಾರೆ