ಬೆಳಗಾವಿಯ ರಾಮತೀರ್ಥ ನಗರ ಸೇರಿದಂತೆ ಮುಂತಾದ ಕಡೆ ಹೆಚ್ಚಾಗಿರುವ ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ನಗರಸೇವಕ ಹಣಮಂತ ಕೊಂಗಾಲಿ ಮನವಿ ಮಾಡಿಕೊಂಡಿದ್ದಾರೆ.
ಹೌದು ರಾಮತೀರ್ಥ ನಗರ, ಶಿವಬಸವ ನಗರ, ಶ್ರೀನಗರ ಮಹಾಂತೇಶ ನಗರ ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ಬೀದಿ ನಾಯಿಗಳ ಕಾಟ ಮಿತಿ ಮೀರಿದೆ. ಆದಷ್ಟು ಬೇಗನೇ ಬೀದಿ ನಾಯಿಗಳ ಸಮಸ್ಯೆಗಳನ್ನು ಬಗೆಹರಿಸಬೇಕು.
ಸಂತಾನ ಹರಣ ಚಿಕಿತ್ಸೆ ಮತ್ತು ಸಾಕಾಣಿಕೆ ಕೇಂದ್ರಗಳನ್ನು ಪಾಲಿಕೆ ಅಡಿಯಲ್ಲಿ ಸ್ಥಾಪಿಸಿ ನಗರದಲ್ಲಿ ನಾಯಿಗಳ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಸೋಮವಾರ ಮಹಾನಗರ ಪಾಲಿಕೆಯಲ್ಲಿ ಆಯುಕ್ತ ಡಾ.ರುದ್ರೇಶ ಘಾಳಿ ಅವರನ್ನು ಭೇಟಿಯಾಗಿ ನಗರಸೇವಕ ಹಣಮಂತ ಕೊಂಗಾಲಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೋಹನ್ ಹೂಗಾರ್, ಮಹಾದೇವ ರಾಥೋಡ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.