ವಿಧಾನ ಪರಿಷತ್ ಪದವೀಧರರ ಹಾಗೂ ಶಿಕ್ಷಕರ ಚುನಾವಣೆ ಅಂಗವಾಗಿ ನಮ್ಮ ಪಕ್ಷದ ಅಭ್ಯರ್ಥಿಗಳಾದ ಶ್ರೀ ಹಣಮಂತ ನಿರಾಣಿ, ಶ್ರೀ ಅರುಣ್ ಶಹಾಪುರ ಅವರ ಪರವಾಗಿ ಇಂದು ಬೆಳಗಾವಿಯಲ್ಲಿ ಶ್ರೀಮತಿ ಸ್ಪೂರ್ತಿ ಪಾಟೀಲ ( ಅಂಗಡಿ ) , ಶ್ರೀಮತಿ ಶೃದ್ಧಾ ಶೆಟ್ಟರ್ ಅಂಗಡಿ ಅವರ ಜತೆಗೆ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆ, ರೈಲ್ ನಗರ, ಪಿ ಡಬ್ಲ್ಯೂ ಡಿ ಕ್ವಾರ್ಟರ್ಸ್ ನಲ್ಲಿ ಮನೆಮನೆಗೆ ತೆರಳಿ ಶಿಕ್ಷಕರ ಹಾಗೂ ಪದವೀಧರರ ಭೇಟಿಯಾಗಿ ಮತಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಪೊರೇಟರ್ ಶ್ರೀ ಸಂದೀಪ್ ಜೀರಗಾಳ , ಶ್ರೀಮತಿ ಸವಿತಾ ಕಾಂಬ್ಳೆ , ಕಾರ್ಯಕರ್ತರಾದ ಶ್ರೀಮತಿ ಮಹಾದೇವಿ ಹಿರೇಮಠ, ಶ್ರೀಮತಿ ಸರೋಜಿನಿ , ಶ್ರೀ ಅಶೋಕ ತೋರಾಲ, ಶ್ರೀಮತಿ ಸವಿತಾ ಕಾಂಬ್ಳೆ, ಶ್ರೀಮತಿ ದೀಪಾ ಕುಡಚಿ, ಶ್ರೀಮತಿ ಇಂದ್ರಾ ಬಾಳಿಕಾಯಿ, ಶ್ರೀ ಭೀಮಗೌಡಾ ಪಾಟೀಲ, ಶ್ರೀ ರವಿ ಪಾಟೀಲ, ಶ್ರೀ ಎಸ್ ಎಲ್ ಕೋಡಿ ಹಾಗೂ ಇತರೆ ಉಪಸ್ಥಿತರಿದ್ದರು.