Breaking News
Home / ನವದೆಹಲಿ / ನಿರುದ್ಯೋಗ ದಿಂದಾಗಿ ಆತ್ಮ ಹತ್ಯೆ ಮಾಡಿಕೊಂಡ ಜನ ನಮ್ಮ ಕರ್ನಾಟಕದವರೇ ಹೆಚ್ಚು……!

ನಿರುದ್ಯೋಗ ದಿಂದಾಗಿ ಆತ್ಮ ಹತ್ಯೆ ಮಾಡಿಕೊಂಡ ಜನ ನಮ್ಮ ಕರ್ನಾಟಕದವರೇ ಹೆಚ್ಚು……!

Spread the love

ಹೊಸದಿಲ್ಲಿ:  ದೇಶದಲ್ಲಿ ನಿರುದ್ಯೋಗದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ ಸಂಖ್ಯೆಯೂ  ಹೆಚ್ಚುಚಾಗುತ್ತಿದ್ದು, ಕಳೆದ ವರ್ಷದ ನಿರುದ್ಯೋಗದಿಂದ 2,851 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ.

2019ರಲ್ಲಿ ದೇಶದಾದ್ಯಂತ 1,39,123 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 3.4ರಷ್ಟು ಅಧಿಕ. 2018ರಲ್ಲಿ ಒಟ್ಟು 1,34,516 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. 2017ರಲ್ಲಿ ನಿರುದ್ಯೋಗ ಕಾರಣದಿಂದ 2,741 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಒಟ್ಟು ಆತ್ಮಹತ್ಯೆಯ ಶೇಕಡ 2ರಷ್ಟಾಗಿದೆ.

ಇನ್ನೂ ದೇಶದಲ್ಲಿಯೇ ಮಹಾರಾಷ್ಟ್ರ ಅಗ್ರಸ್ಥಾನಿಯಾಗಿದೆ. ನಿರುದ್ಯೋಗ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡವ ಸಂಖ್ಯೆ ರಾಜ್ಯದಲ್ಲಿಯೂ ಸಹ ಅಧಿಕವಾಗಿದೆ. ಎರಡನೇ ಬಾರಿಗೆ ಕರ್ನಾಟಕದಲ್ಲಿ ದೇಶದಲ್ಲಿಯೇ ಅತ್ಯಧಿಕ ನಿರುದ್ಯೋಗಿ  ಸಾವಿನ ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಅಂಕಿ ಅಂಶಗಳು ಪ್ರಕಾರ ತಿಳಿದು ಬಂದಿದೆ.


Spread the love

About Laxminews 24x7

Check Also

ಸಿದ್ದರಾಮಯ್ಯನವರೇ ಅಧಿಕಾರದಿಂದ ಇಳೀರಿ, 24 ಗಂಟೆಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳುತ್ತೇವೆ. : ಆರ್. ಅಶೋಕ್ ಸವಾಲು

Spread the loveಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಸಿಎಂ ಸಿದ್ದರಾಮಯ್ಯ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ